Vishnu Sahasranama
Training Online / offline
Vishnu Sahasranama
ವಿಷ್ಣು ಸಹಸ್ರನಾಮ
ವಿಷ್ಣು ಸಹಸ್ರನಾಮ ಪಾರಾಯಣ ಕಲಿತು
ನಿಮ್ಮ ಎಲ್ಲ ಸಮಸ್ಯೆಗಳಿಂದ ಸುಲಭಾವಾಗಿ ಪಾರಾಗಲು ಮಹಾವಿಷ್ಣುವಿನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ.
ಗುರುಮುಖೇನ ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಕಲಿಯಬೇಕು ಯಾವುದೇ ಕಾರಣಕ್ಕೂ ದೈವಿಕ ವಿಧ್ಯೆಗಳನ್ನು ಮಂತ್ರಗಳನ್ನು ಸ್ತೋತ್ರಗಳನ್ನು ಸ್ವತಃ ತಾವೇ ಕಲಿಯುವುದು ಸಮಂಜಸವಲ್ಲ
ವಿಷ್ಣು ಸಹಸ್ರನಾಮ ಸ್ತೋತ್ರವು ಎಲ್ಲಾ ದೇವತಾ ಸ್ತೋತ್ರಗಳಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.
ವಿಷ್ಣು ಸಹಸ್ರನಾಮ ಪಠಿಸುವುದರಿಂದ ಆಗುವ ಲಾಭಗಳು:
. ಈ ಪಾರಾಯಣವನ್ನು ಸರಿಯಾದ ವಿಧಾನ ಮತ್ತು ನಿಯಮಗಳೊಂದಿಗೆ ಮಾಡಿದರೆ, ಶ್ರೀ ಹರಿಯ ಕೃಪೆಯಿಂದ ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ.
1
ಸಂಪತ್ತು, ಸಮೃದ್ಧಿ ಹೆಚ್ಚಾಗುವುದು
2
ಭೌತಿಕ ಆಸೆಗಳು ಈಡೇರುವುದು
3
ಆತ್ಮವಿಶ್ವಾಸ ಹೆಚ್ಚಾಗುವುದು
ವಿಷ್ಣು ಸಹಸ್ರನಾಮವನ್ನು ಏಕೆ ಕಲಿಯಬೇಕು?
- ವಿಷ್ಣು ಸ್ಥಿತಿ ಕರ್ತನಾಗಿರುವುದರಿಂದ ವರ್ತಮಾನದ ಎಲ್ಲಾ ಸಮಸ್ಯೆಗಳಿಗೆ ಪರಿಹಾರದ ಮಾರ್ಗ ಸಿಗುತ್ತದೆ
- ಗಂಡು ಸಂತಾನದ ಭಾಗ್ಯ ಪ್ರಾಪ್ತಿ ಆಗುತ್ತದೆ.
- ವ್ಯವಹಾರ ಮತ್ತು ವ್ಯಾಪಾರದ ಗುಣ ಸ್ವಭಾವಗಳು ಬೆಳೆಯುತ್ತವೆ.
- ಮಾತಿನ ಬುದ್ಧಿವಂತಿಕೆ ಚಾಣಾಕ್ಷತನ ಬೆಳೆಯುತ್ತದೆ.
- ಕುಟುಂಬದವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಬುದ್ಧಿವಂತಿಕೆ ಬೆಳೆಯುತ್ತದೆ.
- ಸಮಾಜದ ಹಿತಾಸಕ್ತಿಗಳನ್ನು ಗೌರವಿಸಿ ಅದರೊಂದಿಗೆ ಜೀವನ ಸಾಗಿಸುವ ತಾಳ್ಮೆಯು ಬೆಳೆಯುತ್ತದೆ.
- ಸಮಸ್ಯೆಗಳನ್ನು ನಿವಾರಿಸುವ ಬುದ್ಧಿವಂತಿಕೆ ಬೆಳೆಯುತ್ತದೆ


ಶ್ರೀ ವಿಷ್ಣು ಸಹಸ್ರನಾಮದಿಂದ ಆಗುವ ಪ್ರಯೋಜನಗಳು
- ಮನೆಯಲ್ಲಿ ನೆಮ್ಮದಿಯ ವಾತಾವರಣ ಏರ್ಪಟ್ಟು ಧನಾತ್ಮಕ ಶಕ್ತಿಯು ಪಸರಿಸುತ್ತದೆ.
- ಪಾರಾಯಣ ಮಾಡುವವರಿಗೆ ಮನಸ್ಸಿಗೆ ನೆಮ್ಮದಿ ಶಾಂತಿ ಉಂಟಾಗಿ ನವ ಚೈತನ್ಯ ಲಭಿಸುತ್ತದೆ.
- ಆರ್ಥಿಕ ಸಮಸ್ಯೆಗಳಿಂದ ದೂರಾಗಬಹುದು
- ಉದ್ಯೋಗ ಸಮಸ್ಯೆಗಳು ದೂರವಾಗುತ್ತವೆ.
- ಮಕ್ಕಳ ವಿದ್ಯಾಭ್ಯಾಸದ ವಿಚಾರಗಳಲ್ಲಿ ಪ್ರಗತಿ ಉಂಟಾಗಿ ಏಕಾಗ್ರತೆ ಹೆಚ್ಚುತ್ತದೆ .
- ದಾಂಪತ್ಯದಲ್ಲಿನ ವಿರಸಗಳು ದೂರವಾಗುತ್ತದೆ
- ಅನಾರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ.
- ಮಕ್ಕಳಿಲ್ಲದ ಸ್ತ್ರೀಯರಿಗೆ ಸಂತಾನ ಭಾಗ್ಯ ಉಂಟಾಗುತ್ತದೆ.
- ವಿವಾಹ ಸಂಬಂಧಿತ ವಿಚಾರದಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
- ಜಾತಕರಿತ್ಯ ಬರುವಂತ ದೋಷಗಳು ದೂರವಾಗುತ್ತವೆ.
ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಗುರುಮುಖೇನ ಏಕೆ ಕಲಿಯಬೇಕು ?
- ಗುರುಗಳು ಪ್ರತಿನಿತ್ಯ ಜಪತಪಾದಿಗಳನ್ನು ಮಾಡಿಕೊಂಡು ವಿಧ್ಯೆ ಹೇಳಿಕೊಡುತ್ತಾರೆ ಹಾಗಾಗಿ ವಿಧ್ಯೆಯು ಸಂಪೂರ್ಣ ಚನ್ನಾಗಿ ಅರ್ಥವಾಗುತ್ತದೆ.
- ಗುರೂಜಿಯವರು ಮಂತ್ರಗಳ ವಿಷ್ಣು ಸಹಸ್ರನಾಮದ ಹಿನ್ನೆಲೆ, ಉದ್ದೇಶ ಮತ್ತು ಈ ಸ್ತೋತ್ರವನ್ನು ಯಾರು ? ಯಾವಾಗ ? ಯಾರಿಗೆ ? ಯಾವ ಸಂದರ್ಭದಲ್ಲಿ ಬೋದನೆಯನ್ನು ಮಾಡಿದರು ಎನ್ನುವುದನ್ನು ತಿಳಿಸುತ್ತಾರೆ.
- ವಿಷ್ಣು ಸಹಸ್ರನಾಮದ ಪ್ರತಿಯೊಂದು ಶ್ಲೋಕಗಳಿಗೂ ಅದರ ಭಾಷ್ಯಾರ್ಥ ವಿವರಣೆಯನ್ನು ಹೇಳಿಕೊಡುತ್ತಾರೆ.
- ಮಂತ್ರಗಳನ್ನು ಹೇಗೆ ಉಪಯೋಗಿಸಬೇಕು ಅದರ ನಿಯಮಗಳೇನು ಎನ್ನುವುದನ್ನು ತಿಳಿಸುತ್ತಾರೆ.
- ಮಂತ್ರಗಳ ಉಚ್ಚಾರಣಾ ಕ್ರಮ, ಪದ ವಿಭಾಗ, ಸ್ವರಗಳ ಏರಿಳಿತ, ಎಲ್ಲವನ್ನೂ ಹೇಳಿಕೊಡುತ್ತಾರೆ.
- ಮಂತ್ರಗಳನ್ನು ಭಾವನಾತ್ಮಕವಾಗಿ ಹೇಗೆ ಹೇಳಬೇಕು ಅದರ ಧ್ಯಾನ ಮಂತ್ರಗಳು ಹಾಗು ಅಂಗನ್ಯಾಸ ಕರನ್ಯಾಸ ಸಹಿತ ಹೇಳಿಕೊಡುತ್ತಾರೆ.
- ಪಂಚಕ್ರಿಯಾ ಶುದ್ದಿಯ ಮುಖಾಂತರ ವಿಧ್ಯಾರ್ಥಿಗಳಲ್ಲಿ ಇರುವಂತಹ ದೈಹಿಕ ಮಾನಸಿಕ ಋಣಾತ್ಮಕ ಗುಣಗಳನ್ನು ನಿವಾರಿಸಿ ಅನಂತರ ವಿಧ್ಯೆಯನ್ನು ಕಲಿಸುತ್ತಾರೆ.
ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ
ರತ್ನ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ವಿಷಯಗಳನ್ನು ಅಧ್ಯಯನ ಮಾಡಿ, ಸ್ವತಃ ನೀವೇ ರತ್ನ ಜ್ಯೋತಿಗಳಾಗಬಹುದು.
ಈ ವಿಷಯವನ್ನು ಕಲಿಯುವ ಆಸಕ್ತಿ ಇದೆಯೇ...?
ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

GOOGLE REVIEwS
Best Place to learn
Posted on Google Sathya CharyaTrustindex verifies that the original source of the review is Google. ಶ್ರೀ ಗುರುಭ್ಯೋ ನಮಃ|| ಹರಿ ಓಂ|| || ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ || || ಗುರುವೇ ಸರ್ವಲೋಕಾನಾಂ ಭಿಷಜೇ ಭವರೋಗಿಣಾಂ । ನಿಧಯೇ ಸರ್ವವಿದ್ಯಾನಾಂ ದಕ್ಷಿಣಾಮೂರ್ತಯೇ ನಮಃ|| ಪರಮ ಪೂಜ್ಯ ಶ್ರೀ ಶಿವಂ ಗುರೂಜಿ ಚರಣಗಳಿಗೆ ನಿಮ್ಮ ಶಿಷ್ಯನಾದ ಸತ್ಯನಾರಾಯಣಚಾರ್ಯ ಅವರು ಮಾಡುವ ದೀರ್ಘ ದಂಡ ನಮಸ್ಕಾರಗಳು. ನಾನು ಸುಮಾರು ತಿಂಗಳಿಂದ ಶಿವಂ ಗುರುಕುಲವೆಂಬ ಜ್ಯೋತಿಷ್ಯ ಜ್ಞಾನ ದೇಗುಲದಲ್ಲಿ ನಾಡಿ ಜ್ಯೋತಿಷ್ಯವನ್ನು ಅಭ್ಯಾಸ ಮಾಡಿರುತ್ತೇನೆ ನನಗೆ ನಾಡಿ ಜ್ಯೋತಿಷ್ಯದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆ ದಿನದಲ್ಲಿ ಬಹುಮುಖ ಪ್ರತಿಭೆಯುಳ್ಳ ಗುರುಗಳು ಜನಸಾಮಾನ್ಯರ ಮಧ್ಯದಲ್ಲಿ ಜನಸಾಮಾನ್ಯರಾಗಿ ದಿನನಿತ್ಯ ಸಮಸ್ಯ ಗಳಿಗೆ ಉತ್ತಮ ಮಾರ್ಗದರ್ಶಕರಾಗಿ ಪ್ರಧ್ಯಾಪಕರಾಗಿ ಗುರುಗಳಾಗಿ ತಮ್ಮನ್ನು ತಾವೇ ಲೋಕಾರ್ಪಣೆ ಮಾಡಿಕೊಂಡಿರುತ್ತಾರೆ. ಇಂಥವರ ಬಳಿ ನಾನು ಶಿಷ್ಯನಾಗಿರುವುದೇ ನಮ್ಮ ಪೂರ್ವಾ ಅರ್ಜಿತ ಪುಣ್ಯ. ಗುರುಗಳು ಅನೇಕ ಕನಸುಗಳನ್ನು ಹಾಗೂ ಉತ್ತಮ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಬಿಡುವಿಲ್ಲದ ತಮ್ಮ ಕೆಲಸಗಳ ಮಧ್ಯೆ ಏನಾದರೂ ಒಂದು ಒಳ್ಳೆಯ ಕೆಲಸವನ್ನು ಮಾಡಬೇಕೆಂಬ ತುಡಿತವನ್ನು ಹೊಂದಿರುತ್ತಾರೆ. ಆಧ್ಯಾತ್ಮ ಮತ್ತು ಪುರಾಣಗಳ ಜೊತೆಗೆ ತುಂಬಾ ಸರಳವಾಗಿ ಸಾಮಾನ್ಯರಿಗೂ ಅರ್ಥ ಆಗುವ ರೀತಿಯಲ್ಲಿ ಶಾಸ್ತ್ರವನ್ನು ತಿಳಿಸಿಕೊಡುತ್ತಿದ್ದಾರೆ ಇಂಥವರ ಬಳಿ ಶಿಷ್ಯನಾಗಿ ಸಾಸಿವೆ ಕಾಳಿನಷ್ಟು ನಾಡಿ ಜ್ಯೋತಿಷ್ಯವನ್ನು ಅರಿತಿರುತ್ತೇನೆ. ಇವರಲ್ಲಿರುವ ತಾಳ್ಮೆ ಸಹನೆ ತಮ್ಮ ಕರ್ತವ್ಯದಲ್ಲಿರುವ ನಿಷ್ಠಾವಂತ ರಾಗಿರುವ ಗುರುಗಳಿಗೆ ಅನಂತ ಅನಂತ ಧನ್ಯವಾದಗಳು. ಶ್ರೀಗಳಿಗೆ ಇನ್ನು ಹೆಚ್ಚಿನ ಸಮಾಜಮುಖಿ ಕಾರ್ಯಗಳನ್ನು ಮಾಡಲು ಅಪಾರ ಶಕ್ತಿ ಸಾಮರ್ಥ್ಯ ಆಯುರಾರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ನಾನು ನಂಬಿರುವ ದೇವರಲ್ಲಿ ಪ್ರಾರ್ಥಿಸುತ್ತೇನೆ. ಇಂತಿ ನಿಮ್ಮ ಶಿಷ್ಯ ಸತ್ಯನಾರಾಯಣ ಆಚಾರ್ ಜಗತ್ತಿನಲ್ಲಿ ಕಿರಿಯನಾದ ನಾನು ಇರುವಷ್ಟು ದಿನ ತಮ್ಮ ಸಲಹೆ ಮತ್ತು ಸೂಚನೆಗಳನ್ನು ಗಂಭೀರವಾಗಿ ತೆಗೆದುಕೊಂಡು ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಜೀವನವನ್ನು ಸಾಗಿಸುತ್ತೇನೆ ಎಂದು ನಿಮಗೆ ವಚನವನ್ನು ನೀಡುತ್ತಿದ್ದೇನೆ. ಧನ್ಯವಾದಗಳು.Posted on Google RANNGGASWAMY VTrustindex verifies that the original source of the review is Google. 🙏ಶ್ರೀ ಗುರುಭ್ಯೋನಮಃ 🙏 ಮೊದಲಿಗೆ ಪರಮಪೂಜ್ಯ ಶ್ರೀ ಶಿವಂ ಗುರೂಜಿರವರ ಪಾದಗಳಿಗೆ ನಮಸ್ಕರಿಸುತ್ತ. ನನಗೆ 12ನೇ ವಯಸ್ಸಿನಿಂದನು ಸಹ ಜ್ಯೋತಿಷ್ಯವನ್ನ ಕಲಿಯಬೇಕು, ಜನರ ಸಮಸ್ಯೆಯನ್ನ ಬಗೆಹರಿಸಬೇಕು ಎಂಬ ಆಸೆ ಇತ್ತು. ನನಗೇ ಸರಿಯಾದ ಸಮಯವದಗಿ ಬಂದಿರಲಿಲ್ಲ, ನಂತರ 24ನೇ ವಯಸ್ಸು ಗೆ ನನಗೆ ಉತ್ತಮವಾದ, ಬ್ರಹ್ಮಜ್ಞಾನ ಉಳ್ಳ ಮಾರ್ಗದರ್ಶಕರು ಸಿಕ್ಕರು.ನಮ್ಮ ಗುರುಗಳು ನನಗೆ ಸುಲಭವಾಗಿ, ಸ್ಪಷ್ಟವಾಗಿ ಜ್ಯೋತಿಷ್ಯವನ್ನ ಹೇಳಿ ಕೊಟ್ಟರು,ನನ್ನ ಜೀವನದಲ್ಲಿ ತುಂಬಾ ಬದಲಾವಣೆಗಳು ಆದವು, ಇದಕ್ಕೆ ನಮ್ಮ ಗುರುಗಳು ಕಾರಣ, ಮತ್ತೆ ನಾನು ಮಾಡಿದ ಪೂರ್ವಜನ್ಮದ ಕರ್ಮ. ನಮ್ಮ ಗುರುಕುಲದಲ್ಲಿ ಅತ್ಯಂತ ಸರಳವಾಗಿ ತರಗತಿಯನ್ನ ಮಾಡುತ್ತಾರೆ, ಅ ದಿನದ ತರಗತಿಯ ರೆಕಾರ್ಡಿಂಗ್ಸ್ ಕೂಡ ನಮಗೆ ದೊರಕುತ್ತದೆ. ನನಗೆ ಮೊದಲ ಗುರುಗಳು ಅಂದರೆ ಶಿವಂ ಗುರೂಜಿ, ಕೊನೆಯ ಗುರುಗಳು ಕೂಡ ನನಗೆ ಇವರೇ ಆಗಿರುತ್ತಾರೆ. ಪ್ರತಿಯೊಂದು ವಿದ್ಯಾಗಳನ್ನ ಹೇಳಿ ಕೊಡುತ್ತಾರೆ. ನನ್ನ ಜೀವನದಲ್ಲಿ ತುಂಬಾ ಧನಾತ್ಮಕವಾದ ಬದಲಾವಣೆ ಕಂಡು ಬಂದಿವೆ.ಏನೇ ಅನುಮಾನ ಇದ್ದರು ಸಹ ಬಗೆಹರಿಸಿಕೊಡುತ್ತಾರೆ, ಸರಿಯಾಗಿ ರೆಸ್ಪೋನ್ಸ್ ಕೂಡ ಮಾಡುತ್ತಾರೆ ನಮ್ಮ ಗುರುಕುಲದಲ್ಲಿ. ನನ್ನ ಜನ್ಮ ಸಾರ್ಥಕ ಶಿವಂ ಗುರುಕುಲಕ್ಕೆ ನಾನು ಸದಾ ಚಿರಋಣಿ ಆಗಿರ್ತೀನಿ. 🙏ಗುರುಗಳಿಗೆ ನನ್ನ ಅನಂತ ಅನಂತ ಧನ್ಯವಾದಗಳು 🙏Posted on Google Shailashree JoshiTrustindex verifies that the original source of the review is Google. It is a good online plat form to learn astrology We learn many things and facts and at the same time we learn the application also Thank you gurukula for providing good platform🙏🙏Posted on Google Annappurna A R AnuTrustindex verifies that the original source of the review is Google. ನಮಸ್ತೆ ಎಲ್ಲರಿಗೂ ಶಿವಂ ಗುರೂಜಿ ಯವರು ತುಂಬಾ ಚನ್ನಾಗಿ ಎಲ್ಲರಿಗೂ ಅರ್ಥ ಆಗುವ ರೀತಿ ಯಲ್ಲಿ ವಿದ್ಯೇ ಕಲಿಸುತಾರೆ ಇವರ ಗುರುಕುಲ ದಲ್ಲಿ ಅಡ್ಮಿಷನ್ ಸಿಕ್ಕಿದ್ದು ನನ್ನ ಪುಣ್ಯ ಪ್ರತಿಯೊಬ್ಬರು ನಾಡಿ ಜೋತಿಷ್ಯ ವನ್ನು ಕಲಿತು ನಿಮ್ಮ ಜೀವನ ದಲ್ಲಿ ಬರುವ ಅಡೆತದೆ ನೀವೇ ಬಗೆಹರಿಸಿ ಕೊಳ್ಳಬಹುದು ಧನ್ಯವಾದಗಳು ಗುರೂಜಿ 🙏🙏🙏🙏🙏🙌Posted on Google Veena RaviTrustindex verifies that the original source of the review is Google. ಶ್ರೀ ಗುರುಭ್ಯೋ ನಮಃ ಪೂಜ್ಯ ಶ್ರೀ ಶಿವಂ ಗುರುಜಿ ಯವರ ಪಾದ ಕಮಲಗಳಿಗೆ ನಮಿಸುತ್ತೆನೆ ನಾನು ವೀಣಾ ಎಂ ರವಿ ಲಲಿತಾ ಸಹಸ್ರ ನಾಮ ಕಲಿಯಲು ಗುರುಕುಲಕ್ಕೆ ಸೇರಿಕೊಂಡಿದ್ದೆ , ಲಲಿತಾ ಸಹಸ್ರ ನಾಮದ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದು ನಮ್ಮ ಗುರುಕುಲುದಲ್ಲಿ ಯಂದು ಹೇಳಲು ಹೆಮ್ಮೆ ಎನಿಸುತದೆ ಅದರ ಮಹತ್ವಾ ತಿಳಿದಮೇಲೆ ನನ್ನಲ್ಲಿ ಏಕಾಗ್ರತೆ ಹೆಚ್ಚಿತು ನಾವು ತುಂಬಾ ಮೌಡ್ಯ ಪದ್ದತಿಯಲ್ಲಿ ಇದ್ದೆವು ಎಂದು ತಿಳಿದುಬಂತು ಕಂಡ ಕಂಡ ದೇವರಿಗೆ ಪೂಜೆ ಮಾಡುತಾ ಬಂದು ನಮ್ಮ ಕಾಲ ಹರಣ ಮಾಡಿದೆವು ಯೆನ್ನಿಸಿತು , ಲಲಿತಾ ತ್ರಿಪುರಾ ಸುಂದರಿ ಜಗನ್ಮಾತೆ ಯಂದು ದಾರಿ ತೋರಿಸಿದ ನಮ್ಮ ಗುರುಗಳಿಗೆ ನಮಸ್ಕಾರಗಳು , ಅರ್ಥ ತಿಳಿದು ಕಲಿಯುವದರಿಂದ ದೇವಿ ಸ್ವರೂಪ ನಮ್ಮ ಕಣ್ಣಮುಂದೆ ಬರುತದೆ ನಮಗೆ ಏಕಾಗ್ರತೆ ಹೆಚ್ಚುತದೆ ನಾನು ವೈಕ್ತಿಕವಾಗಿ ಬಹಳ ನೊಂದಿದ್ದೆ ಅದರಿಂದ ಹೊರ ಬರುವ ಧಾರಿ ತೋರಿಸಿ ಕೊಟ್ಟ ಗುರುಕುಲದ ಗುರುವೃಂದಕ್ಕೆ ನನ್ನ ಹೃತ್ಪೂರ್ವಕ ನಮಸ್ಕಾರಗಳು ಶ್ರೀ ಗುರುಭ್ಯೋ ನಮಃ ಪರಮ ಪೂಜ್ಯರಾದ ಶ್ರೀ ಶಿವಂ ಗುರುಗಳ ಪಾದ ಕಮಲಗಳಿಗೆ ನಮಸ್ಕರಿಸುತ್ತ , ನಾನು ಕಲಿಯುತ್ತಿರುವ ಜೋತಿಷ್ಯ ಪಾಠ ದ ಬಗ್ಗೆ ನನ್ನ ಅನಿಸಿಕೆಗಳನ್ನು ನಿವೇದಿಸುತ್ತೇನೆ ಜೋತಿಷ್ಯ ಅಂದರೆ tv ಮಾಧ್ಯಮದಲ್ಲಿ ನೋಡುತಿದ್ದರೀತಿ ಗುರುಕುಲದಲ್ಲಿ ಗುರುಗಳು ಕಲಿಸಿ ಕೊಟ್ಟ ರೀತಿಗೂ ತುಂಬಾ ಅಜಗಜಾಂತರ ವ್ಯತ್ಯಾಸವಿದೆ ಗುರುಗಳು ಕಲಿಸಿ ಕೊಟ್ಟ ರೀತಿಯಲ್ಲಿ ಸತ್ಯ ಅಡಗಿದೆ ನಮ್ಮ ಸ್ವಭಾವಹಗಳು ಬದಲಿಸಿಕೊಂಡರೆ ನಮ್ಮ ಜೀವನ ಶೈಲಿ ಬದಲಾಯಿಸಿ ಕೊಂಡರೆ ಒಂದು ರೀತಿ ನಮ್ಮ ಕುಂಡಲಿಯನ್ನೇ ಬದಲೈಹಿಸಿಕೊಂಡಹಗೆ ನಮ್ಮ ಜೀವನವೇ ಬದಲಾಯಿಸಿ ಕೊಳ್ಳ ಬಹುದು ನಾನು ಒಬ್ಬ ಗೃಹಿಣಿ , ಇಲ್ಲಿ ನಮ್ಮ ಭಾವನೆ ಆಲೋಚನೆ ವರ್ತನೆ ಹೇಗಿರುತೆ ಹಾಗೆ ನಮ್ಮ ಜೀವನ ವಿರುತೆ ಎನ್ನುದು ಇಲ್ಲಿ ನಮಗೆ ಸಾಭೀತು ಆಗಿದೆ , ಲೋಕದ ಡೊಂಕು ತಿದ್ದುವ ಬದಲು ನಮ್ಮ ಡೊಂಕು ತಿದ್ದಿ ಕೊಳ್ಳುದು ಉತ್ತಮ ಹಾಗೂ ಅದೇ ಸರಿ ಯುಂದು ಗುರೂಜಿ ಅವರ ಹತ್ತಿರ ಕಲಿತಿದ್ದೇವೆ ಶಿವಂ ಗುರುಕುಲ ಎಂಬ ದೊಡ್ಡ ಸಾಗರದಲ್ಲಿ ಕೇವಲ ಒಂದು ಬೊಗಸೆ ಅಷ್ಟೆ ಇನ್ನು ಸಿಕ್ಕಿದೆ ಇನ್ನು ಸಾಗತದಷ್ಟು ಇದೆ ಆ ಜ್ಞಾನವನ್ನು ಆಸ್ವಾದಿಸಲು ಗುರುಗಳು ನಮಗೆ ಆಯುಷ್ ಆರೋಗ್ಯ ಕರುಣಿಸಲಿ ಎಂದು ಬೇಡಿಕೊಳ್ಳುತ್ತೇನೆ ನನಗೆ 28 ವರ್ಷದ ಮಗ ಇದ್ದಾನೆ ಅವನ ಮದ್ವೆ ಬಗ್ಗೆ ಗುರೂಜಿ ಹತ್ತಿರ ಕೌನ್ಸಿಲಿಂಗ್ ತೆಗೆದುಕೊಂಡಾಗ ಅವನಿಗೆ ನೀವ್ ನೋಡೋದು ಬೇಡ ಅವನು ಕೆಲಸ ಮಾಡುವ ಜಾಗದಲ್ಲಿ ಒಬ್ಬರನೊಬ್ಬರು ಅರಿತು ಇರುತಾರೆ ಎಂದು ಹೇಳಿದದ್ದರು ಅವರ ಆಶೀರ್ವಾದದಿಂದ ಹಾಗೆ ನಡಿತಿದೆ ಹುಡುಗಿ ಬಗ್ಗೆ ಹೇಳಿದರು ಅದೇ ರೀತಿ ಸಿಕ್ಕಿದಾಳೆ ಅವರು ಪರಸ್ಪರ ಅರ್ಥ ಮಾಡಿಕೊಂಡು ಆಮೇಲೆ ನಿಮಗೆ ತಿಳಿಸುತ್ತಾರೆ ಎಂದಿದರೂ ಅದೇ ರೀತಿ ಶಿವಂ ಗುರುಗಳ ಆಶೀರ್ವಾದ ದಿಂದ ಹಾಗೆ ನಡಿತಿದೆ ನಾನು ಗುರುಕುಲದ ವಿದ್ಯಾರ್ಥಿ ಆಗಿರಲಿಲ್ಲ ಅಂದಿದ್ದರೆ ನಾನು ಹುಡುಗಿ ನೋಡಿ ಮದುವೆ ಮಾಡಿದರೆ ಇಷ್ಟು ಹೊತಿಗೆ ಕಂಡಿತ ಡೈವೋರ್ಸ್ ಆಗುತಿತ್ತು ಇಂಥ ಸನ್ನಿವೇಶಗಳು ತುಂಬಾ ಇದೆ ಗುರುಗಳ ಮಾರ್ಗ ದರ್ಶನ ನಮ್ಮ ಕಣ್ಣು ತೆರೆಸಿವೆ ಗುರು ಕುಲದ ವಿದ್ಯಾರ್ಥಿ ಆಗಿರುವ ನಾವೆ ಧನ್ಯರು ನಿಮ್ಮ ಚರಣ ಕಮಲಗಳಿಗೆ ನನ್ನ ನಮಸ್ಕಾರಗಳು 🙏Posted on Google Rashmi l RashmiTrustindex verifies that the original source of the review is Google. ಶ್ರೀ ಗುರುಭ್ಯೋ ನಮಃ 🙏ಶಿವಂ ಗುರೂಜಿಯವರ ಪಾದರವಿಂದಾಗಳಿಗೆ ನಮನಗಳು 🙏 ಲಲಿತಾ ದೇವಿಯ ಸಹಸ್ರನಾಮ ಕೇವಲ ಪಠನೆ ಮಾಡುವುದರಿಂದ ಪ್ರಯೋಜನವಿಲ್ಲ. ಭಾವಾರ್ಥ ತಿಳಿಯುವುದು ಭಾವನೆ ಬೆಳೆಸಿಕೊಳ್ಳುವುದು ಅಗತ್ಯ . ಭೂತ ಶುದ್ಧಿಯಿಂದ ಪ್ರಯೋಜನಗಳೇನು. ಹಾಗೂ ನಮ್ಮ ದೇಹದ ದೇಗುಲದಲ್ಲಿ (ಸಪ್ತ ಚಕ್ರಗಳಲ್ಲಿ) ಯೋಗಿನಿ ನ್ಯಾಸ ಮಾಡುವುದು ಹೇಗೆ ಅದರಿಂದ ದೇಹದಲ್ಲಿ ಮನಸ್ಸಿನಲ್ಲಿ ಆಗುವ ಬದಲಾವಣೆ.ನಮ್ಮ ನಿತ್ಯ ಜೀವನದಲ್ಲಿ ಬದಲಾವಣೆ ಕಾಣಲು ಲಲಿತಾ ಸಹಸ್ರ ನಾಮವನ್ನು ಹೇಗೆ ಆರಾಧಿಸಬೇಕು. ಗುರುಕುಲದಿ೦ದ ನಮ್ಮಗೆ ಜೀವನಕ್ಕೆ ಬೇಕಾದ ಕಲಿಕೆ ಸಿಗುತ್ತಿದೆ. ನಮಗೇ ಗುರುಗಳು ಸಮಯದ ಅನುಸರಿಸಿ ವಿದ್ಯೆ ಹೇಳಿ ಕೊಡುವುದಿಲ್ಲ ನಮ್ಮ ಕಲಿಕೆಯನ್ನು ನೋಡಿ ವಿದ್ಯೆಯನ್ನು ಹೇಳಿ ಕೊಡಲಾಗುತ್ತದೆ. ವಿದ್ಯೆಯಲ್ಲಿ ಗೌಪ್ಯತೆಯಿಲ್ಲದೆ ಎಲ್ಲಾ ತರಹದ ರಹಸ್ಯಗಳನ್ನು ನಮಗೆ ತಿಳಿಸಲಾಗುತ್ತದೆ. ವಿದ್ಯೆಯ ಸಿದ್ಧಾಂತ ಕಲಿಸುವುದು ಮಾತ್ರವಲ್ಲದೆ ಪ್ರಾಯೋಗಿಕ ತರಗತಿಗಳು ಕೂಡ ಚೆನ್ನಾಗಿ ಹೇಳಿ ಕೊಡಲಾಗುತ್ತದೆ. ಹಾಗೂ ನಮ್ಮಲ್ಲಿ ಕಲಿಕೆಯ ಪ್ರಮಾಣವನ್ನು ಪರಿಶೀಲನೆ ಮಾಡಲಾಗುವುದು. ಹಾಗೂ ಕಲಿತ ವಿದ್ಯೆಯಿಂದ ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಮಾರ್ಗದರ್ಶನ ನೀಡಲಾಗುತ್ತದೆPosted on Google parvathi srinivasaTrustindex verifies that the original source of the review is Google. ಗುರುಗಳೇ ನೀವು ಹೇಳಿಕೊಡುತ್ತಿರುವ ಲಲಿತಾ ಸಹಸ್ರನಾಮ ಶ್ಲೋಕದ ಅರ್ಥ ಹಾಗೂ ವಿವರಣೆ ಇಂದ ನಾವು ಎಲ್ಲಿ ತಪ್ಪು ಮಾಡಿದ್ದೇವೆ ಹಾಗೂ ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂದು ತಿಳಿದುಕೊಂಡು ನಮ್ಮ ನಿತ್ಯ ಜೀವನದಲ್ಲಿ ಅದನ್ನು ಹೇಗೆ ಅಳವಡಿಸಿಕೊಳ್ಳಬೇಕೆಂದು ಸಂಪೂರ್ಣವಾಗಿ ಅರ್ಥ ಮಾಡಿಸಿದಕ್ಕಾಗಿ ಗುರುಗಳಿಗೆ ಧನ್ಯವಾದಗಳು ನನಗೆ ತುಂಬಾ ದಿನಗಳಿಂದ ಲಲಿತಾ ಸಹಸ್ರನಾಮ ಪಟಿಸಬೇಕೆಂಬ ಆಸೆ ಇತ್ತು ಆದರೆ ಎಲ್ಲಿಯಾದ್ರೂ ತಪ್ಪಾದರೆ ಎಂಬ ಭಯದಲ್ಲಿ ಇದ್ದೆ ಆದರೆ ಗುರುಗಳು ಅದನ್ನು ಪಟಿಸುವ ಕ್ರಮ ಹೇಳಿಕೊಟ್ಟಿದಕ್ಕೆ ಗುರುಗಳಿಗೆ ಧನ್ಯವಾದಗಳುPosted on Google NANDEESHA HN NANDITrustindex verifies that the original source of the review is Google. ನಮಸ್ಕಾರ ಗುರುಗಳೇ 🙏🏻 ಮೊದಲಿಗೆ ನಾವು ಶಿವಂ ಗುರುಕುಲಕ್ಕೆ ಸೇರಿದೆ ಒಂದು ಅದೃಷ್ಟ, ನಾಡಿ ಜ್ಯೋತಿಷ್ಯದಲ್ಲಿ ಹೇಳಿಕೊಡುವ ಗ್ರಹಗಳ ಸಂಯೋಗದಲ್ಲಿ ತುಂಬಾ ಉಪಯುಕ್ತ ಮಾಹಿತಿಗಳನ್ನು ತಿಳಿಸಿ ಕೊಡುತ್ತಿದ್ದೀರಿ, ಲಲಿತಾ ಸಹಸ್ರನಾಮ, ಖಡ್ಗಮಾಲಾ ಸೋತ್ರ, ತ್ರಿಶಕ್ತಿ ಲಲಿತ ಅಷ್ಟಕ, ಹೀಗೆ ಇನ್ನು ಅನೇಕ ಮುಂತಾದ ಸೋತ್ರಗಳನ್ನು ಹೇಳಿಕೊಡುತ್ತಿದ್ದೀರಿ ಈ ಎಲ್ಲಾ ಸೋತ್ರಗಳು ಸಂಸ್ಕೃತದಲ್ಲಿ ಇರುವುದರಿಂದ ನೀವು ಪದ ವಿಂಗಡನೆ ಮಾಡಿ ಹೇಳಿಕೊಡುವುದು ಪ್ರತಿಯೊಂದು ಪದಕ್ಕೂ ಅರ್ಥ ವಿವರಣೆ ಮಾಡುವುದು ಪ್ರತಿಯೊಂದು ಶ್ಲೋಕದ ತಾಯಿಯ ವರ್ಣ ಚಿತ್ರವನ್ನು ತೋರಿಸಿ ಹೇಳಿಕೊಡುವುದು ಹೀಗೆ ಇನ್ನೂ ತುಂಬಾ ಉಪಯುಕ್ತ ಮಾಹಿತಿಗಳು ತುಂಬಾ ಅನೇಕ ವಿಚಾರಗಳನ್ನು ತಿಳಿಸಿ ಕೊಡುತ್ತಿದ್ದೀರಿ ಅದರಲ್ಲೂ ಲಲಿತಾ ಸಹಸ್ರನಾಮದಲ್ಲಿ ಅಡಗಿರುವ ಬ್ರಹ್ಮಾಂಡ ರಹಸ್ಯವನ್ನು ತುಂಬಾ ವಿವರವಾಗಿ ಹೇಳಿಕೊಡುತ್ತಿದ್ದೀರಿ, ದಶಮುದ್ರಗಳು, ಸಪ್ತಚಕ್ರಗಳ ಬೀಜಾಕ್ಷರ ಯೋಗಿನಿ ದೇವತೆಗಳು ದೇವತೆಯ ಆಯುಧ ವಾಹನ ನೈವೇದ್ಯ ಇದನ್ನೆಲ್ಲ ನಾವು ಯಾವ ರೀತಿ ಮನಸ್ಸಿನಲ್ಲಿ ಯಾವ ರೀತಿ ಧ್ಯಾನಿಸಬೇಕೆಂದು ಹೇಳಿಕೊಟ್ಟಿದ್ದೀರಿ, ಇವೆಲ್ಲವೂ ಅಲ್ಲದೆ ಆರೋಗ್ಯಕ್ಕೆ ಯಾವ ಆಹಾರಗಳನ್ನು ಸೇವನೆ ಮಾಡಬೇಕು ಎಂದು ಪೋಸ್ಟರ್ ಗಳ ಮೂಲಕ ತಿಳಿಸಿ ಕೊಡುತ್ತಿದ್ದೀರಿ, ಮುಖ್ಯವಾಗಿ ದಿನನಿತ್ಯದ ಪಂಚ ಕ್ರಿಯ ಯಾವ ರೀತಿ ಮಾಡಬೇಕೆಂದು ಹೇಳಿಕೊಟ್ಟಿದ್ದೀರಿ ಹೀಗೆ ಇನ್ನೂ ಹೆಚ್ಚಿನ ವಿಷಯವನ್ನು ಗುರುಕುಲದಲ್ಲಿ ಹೇಳಿಕೊಟ್ಟುತ್ತಿದ್ದೀರಿ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏🏻🌹 ಗುರುಪಾದಗಳಿಗೆ ಸಾಷ್ಟಾಂಗ ನಮಸ್ಕಾರಗಳು 🙏🏻💐🌹Posted on Google Roopa SangaTrustindex verifies that the original source of the review is Google. Am greatful to shivam guruji ..recieved the such really abundence content of Lalitha devi , experienced healing my health issue . Thank you so much guruji 🙏🙏🙏Load moreVerified by TrustindexTrustindex verified badge is the Universal Symbol of Trust. Only the greatest companies can get the verified badge who has a review score above 4.5, based on customer reviews over the past 12 months. Read more
ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಮಂತ್ರಗಳನ್ನು ಸ್ವತಃ ತಾವೇ ವೀಡಿಯೋಗಳನ್ನು ನೋಡಿಕೊಂಡು ಏಕೆ ಕಲಿಯಬಾರದು..?
- ಸ್ವತಃ ಮಂತ್ರಗಳನ್ನು ತಾವೇ ಕಲಿಯುವುದರಿಂದ ಮಂತ್ರಗಳಲ್ಲಿ ಅಪಬ್ರಂಶಗಳು ಉಂಟಾಗುತ್ತವೆ..
- ಮಂತ್ರಲೋಪ, ಸ್ವರಲೋಪ, ಛಂದಸ್ಸಿನ ಲೋಪ, ಭಾವಾಲೋಪ ಹಾಗು ಕ್ರಿಯಾ ಲೋಪಗಳು ಉಂಟಾಗುತ್ತವೆ.
- ಯಾವುದು ಸರಿ ಯಾವುದು ತಪ್ಪು ಎನ್ನುವ ತಿಳುವುಳಿಕೆ ಸಿಗದೇ ಕೊನೆಯವರೆಗೂ ಗೊಂದಲದಲ್ಲಿಯೇ ಸಿಲುಕಬೇಕಾಗುತ್ತದೆ.
- ಮಂತ್ರಗಳನ್ನು ತಪ್ಪಾಗಿ ಉಚ್ಚಾರಣೆ ಮಾಡಿದರೆ ಪುಣ್ಯದ ಬದಲಾಗಿ ಪಾಪ ಕರ್ಮಗಳನ್ನು ಸುತ್ತಿಕೊಳ್ಳಬೇಕಾಗುತ್ತದೆ.
- ಸ್ವತಃ ನೀವೇ ಕಲಿತಿರುವ ಸ್ತೋತ್ರಗಳ ಮುಖಾಂತರ ಸಂಕಲ್ಪಗಳನ್ನು ಮಾಡಿಕೊಳ್ಳುವ ಅರ್ಹತೆಯು ಇರುವುದಿಲ್ಲ.
- ಸ್ತೋತ್ರಗಳನ್ನು ಸರಿಯಾಗಿ ಪದವಿಭಾಗ ಮಾಡದೇ ಹೇಳಿದರೆ ಅರ್ಥಕ್ಕೆ ದಕ್ಕೆಯುಂಟಾಗಿ ಅನರ್ಥವಾಗುತ್ತದೆ.
- ಆ ಸ್ತೋತ್ರಗಳ ಭಾವಾರ್ಥ ತಿಳಿಯದೇ ಸ್ತೋತ್ರಕಲಿಕೆಯು ವ್ಯರ್ಥವಾಗುತ್ತದೆ ಅಥವಾ ಮೌಡ್ಯತೆಯಾಗಿ ಉಳಿಯುತ್ತದೆ.
- ಅನುಷ್ಠಾನ ಪೂಜಾ ಕ್ರಮಗಳು ಗೊತ್ತಿಲ್ಲದೇ ಮಂತ್ರಗಳನ್ನು ಕಲಿತರೆ ಮಹಾವಿಷ್ಣುವಿನ ಪೂರ್ಣ ಆಶೀರ್ವಾದ ಪ್ರಾಪ್ತಿಯಾಗುವುದಿಲ್ಲ.
- ಯಾವದಿನ, ಯಾವನಕ್ಷತ್ರ, ಮತ್ತು ಯಾವ ಸಮಯದಲ್ಲಿ ವಿಷ್ಣು ಸಹಸ್ರನಾಮವನ್ನು ಹೇಳಬಾರದು ಎನ್ನುವುದು ತಿಳಿಯುವುದಿಲ್ಲ

Teaching Videos
By Shivam guruji
[wptube id=”1058″]

