Untitled-1 (10)

ಶ್ರೀ ವಿದ್ಯಾ ಸಾಧನೆಯ 3 ಮಾರ್ಗಗಳು

ಮೊದಲ ಮಾರ್ಗ

ಪ್ರಶ್ನೆ – ಕೌಲ ಮಾರ್ಗ ಎಂದರೇನು.?

ಉತ್ತರ : ಶ್ರೀ ವಿದ್ಯಾ ಸಾಧನೆಯಲ್ಲಿ 3 ಮಾರ್ಗಗಳಿವೆ ಅದರಲ್ಲಿ ಒಂದು ಕೌಲಮಾರ್ಗ.

ಈ ಕೌಲ ಪಥದಲ್ಲಿ = ಇದರಲ್ಲೂ ಎರಡು ಕವಲುಗಳಿವೆ.

  1. ದಕ್ಷಿಣ, 2.ವಾಮ.

ಈ ಮಾರ್ಗದಲ್ಲಿ, ಬಾಹ್ಯ ಆರಾಧನೆ ಮತ್ತು ಪಂಚ ಮಕಾರಗಳ (ಮಧ್ಯ, ಮಾಂಸ, ಮತ್ರ್ಯ, ಮುದ್ರ, ಮೈಥುನ) ಬಳಕೆಯಾಗುತ್ತದೆ.

ಮತ್ತು ಬಹುತೇಕ ನಮ್ಮ ಲೌಕಿಕ ಆಸೆ, ಆಕಾಂಕ್ಷೆಗಳ ಪೂರೈಕೆಗಾಗಿ ಶಕ್ತಿಯನ್ನಾರಾಧಿಸಲಾಗುತ್ತದೆ ಎಂದು ಹೇಳಲಾಗುತ್ತದೆ.ನಿಜವಾಗಿ ಹೇಳಬೇಕೆಂದರೆ, 

೧. ಮಾಂಸ ಭಕ್ಷಣ ಎಂದರೆ: ಖೇಚರಿ ಮುದ್ರ. ಮಾಂಸಲವಾದ ನಾಲಿಗೆಯನ್ನು ನುಂಗುವಂತೆ ಗಂಟಲಿನ ಒಳಭಾಗಕ್ಕೆ ಒಯ್ಯುವುದು.
೨. ಮತ್ಸ್ಯ : ಎಂದರೆ ನಮ್ಮ ಗಂಗ ಯಮುನ ಸರಸ್ವತಿ ಎಂದು ಕರೆಯಲಾಗುವ ಇಡಾ, ಪಿಂಗಳ ಮತ್ತು ಸುಷುಮ್ನಾ ನಾಡಿಗಳಲ್ಲಿ ಪ್ರಾಣಾಯಾಮದ ಮೂಲಕ ಸಂಚರಿಸುವ ವಾಯು.
೩. ಮುದ್ರ : ಎನ್ನುವುದು ಪೂಜಾ ಸಮಯದಲ್ಲಿ ನಾವು ತೋರಿಸುವ ಮುದ್ರೆಗಳು.
೪. ಮೈಥುನ :ಎಂದರೆ ಧ್ಯಾನ ಮತ್ತು ಸಾಧನೆಯ ಮೂಲಕ ನಮ್ಮ ಎಡ(ಪುರುಷ) ಮತ್ತು ಬಲ(ಸ್ತ್ರೀ) ಮಸ್ತಿಷ್ಕಗಳ ಒಂದಾಗುವಿಕೆ.

೫. ಮಧ್ಯ : ಎನ್ನುವುದು ಇವೆಲ್ಲ ಸಾಧನೆಗಳನ್ನು ಮಾಡುವಾಗ ನಮ್ಮ ಲಲನಾ ಗ್ರಂಥಿಯು ಚೇತನಗೊಂಡು ಅದರಿಂದ ಸ್ರವಿಸುವ ಮಾದಕ ಮತ್ತು ಸಮಾಧಿ ಸ್ಥಿತಿಗೊಯ್ಯುವಂತಹ ದ್ರವ.

ಇದು ದಕ್ಷಿಣಾಪಂತಿಗಳು ಅನುಸರಿಸುವ ಮಾರ್ಗ.

ಇನ್ನೂ ವಾಮ ಪಂತಿಗಳು ಇವೆಲ್ಲವನ್ನೂ ಅದರ ಪದದ ನಿಜ ರೂಪದಲ್ಲಿ ಅನುಸರಿಸುವರು.
ಈ ಪಥ ಸ್ವಲ್ಪ ಕಠಿಣವೂ ಹೌದು. ಇದರಲ್ಲಿ ಎಡವುವ ಸಾಧ್ಯತೆಗಳು ಜಾಸ್ತಿ.

02 ನೇ ಮಾರ್ಗ

ಪ್ರಶ್ನೆ : ಸಮಯಾಚಾರ ಎಂದರೇನು.?

ಉತ್ತರ : ಸಹ =ಸಂಗಡ. ಮಯಾ = ನನ್ನ, ಎಂದರೆ = ಸದಾ ನನ್ನ ಸಂಗಡ.

ದಿನದ ಒಂದು ನಿರ್ಧಿಷ್ಟ ಸಮಯದಲ್ಲಿ ಮಾತ್ರ ಪೂಜಿಸಿ, ನೆನಪಿಸಿಕೊಳ್ಳುವುದಲ್ಲದೇ, ಸದಾ ನನ್ನೊಡನೆಯೇ ಇರತಕ್ಕ  ಚೈತನ್ಯ.

ಸಮಯಾ ಎನ್ನುವ ಪದವೇ ಸೂಚಿಸುವಂತೆ  ಐಖ್ಯತ,ಆ ಚೈತನ್ಯವೂ, ಈ ಚೈತನ್ಯವೂ ಒಂದೇ ಎಂಬ ಅವಿನಾಭಾವ.
ಇದು  ಒಂದು ಸಾಧನೆಯ ಮಾರ್ಗ ಎಂದೆನಿಸುವುದಿಲ್ಲ. ಸಾಧನೆಯ ಹಾದಿಯಲ್ಲಿ ಮುಂದುವರೆದಂತೆ ಸಾಧಕನು ತಲುಪುವ ಒಂದು ಸ್ಥಿತಿ.

ಮಿಶ್ರದಲ್ಲಿ ಶುರುವಾದ ಸಾಧನ, ಸಮಯದಲ್ಲಿ ಅಂತ್ಯವಾಗುತ್ತದೆ.ಇದು ಎಲ್ಲವನ್ನೂ ಮೀರಿ ನಿಂತ ಐಕ್ಯತಾ ಭಾವ. ಆದರೆ ಇದು ಸಾಧನೆಯ ಕೊನೆಯ ಹಂತವೇ ವಿನಃ ಆರಂಭದಲ್ಲಿ ನಿರ್ಗುಣೋಪಾಸನೆ ಸಾಧಿಸುವವರಿಗೆ ಅತ್ಯಂತ ಸುಲಭ.

ಇದು ತನ್ನೊಳಗೇ ತಾನು ತನ್ನನ್ನು ಕಂಡುಕೊಳ್ಳುವ ಪ್ರಯತ್ನ.

ಬಾಹ್ಯ ಪೂಜಾವಿಧಿಯ ಪರಿಣಾಮವೂ, ಅಂತರ್ಯಾಗವೂ ಒಂದೇ ಫಲ ನೀಡುವುದರಿಂದ ಯಾವ ಪಥದಲ್ಲಿ ಮುಂದುವರೆದರೂ ಏನೂ ಅಡ್ಡಿಯಿಲ್ಲ.

ಸಮಯ ಮಾರ್ಗವನ್ನನುಸರಿಸುವುದರಿಂದ, ನಾವು ಎಲ್ಲಿದ್ದರಲ್ಲಿ ಯಾವ ಬಾಹ್ಯ ಪರಿಕರಣಗಳ ಅವಶ್ಯಕತೆ ಇಲ್ಲದೆ, ಕಾಲ, ದೇಶಗಳ ಪರಿವೆ ಇಲ್ಲದೆ ನಮ್ಮ ಸ್ವಸ್ವರೂಪದೆಡೆಗೊಯ್ಯುವ ಉತ್ತಮವಾದ ಮಾರ್ಗವೇ ಸಮಯಾಚಾರ.

03 ನೇ ಮಾರ್ಗ

ಪ್ರಶ್ನೆ – ಮಿಶ್ರಪಥ ಎಂದರೇನು.?

ಉತ್ತರ -ಶ್ರೀ ವಿದ್ಯಾ ಅನುಷ್ಠಾನ  ಸಾಧನೆಯಲ್ಲಿ ಇರುವ 3ನೇ ಮಾರ್ಗ ಮಿಶ್ರಪಥ

ಇಲ್ಲಿ ಬಾಹ್ಯವೂ ಇದೆ, ಅಂತರ್ಯಾಗವೂ ಇದೆ.ಇಲ್ಲಿ ಭಕ್ತಿಯೂ ಇದೆ, ಬೇಡಿಕೆಯೂ ಇದೆ.ಮತ್ತು ಪಂಚ ಮಕಾರಗಳ ಬದಲಿಗೆ ಪಂಚ ತತ್ವಗಳ ಬಳಕೆಯಾಗುತ್ತದೆ.ಇದು ಎಲ್ಲರಿಗೂ ಹಿಡಿಸುವಂತಹ ಮತ್ತು ಸುಲಭವಾಗಿ ಸಾಧಿಸಬಲ್ಲ ಹಾದಿಯಾಗಿದೆ.

ಉದಾಹರಣೆಗೆ – ಪೂಜೆ ಎಂದರೆ ಹೂವು, ಹಣ್ಣುಗಳು, ದೀಪ, ಧೂಪ, ಗಂಧ ಮತ್ತು ನೈವೇಧ್ಯ. ಇದೆಲ್ಲ ಪಂಚ ತತ್ವಗಳ ಪ್ರತೀಕ ಎಂದು ಅರಿವಿದ್ದರೂ, ಅದರಿಂದ ಮೇಲೇರಿ ನಿರಾಕಾರ ಚೈತನ್ಯವನ್ನು ಕಲ್ಪಿಸಿಕೊಳ್ಳಲು ಸ್ವಲ್ಪ ಕಷ್ಟಸಾಧ್ಯವಾಗಬಹುದು.

ಎದುರಿಗಿರುವ ರೂಪ ರೇಶೆಗಳಿಂದ ಕೂಡಿದ ವಸ್ತುವಿನ ಮೇಲೇ ಏಕಾಗ್ರ ಮಾಡಲಾಗುವುದಿಲ್ಲ, ಇನ್ನು ನಿರಾಕಾರದ ಮೇಲೆ ಹೇಗೆ ಮನಸನ್ನು ನಿಲ್ಲಿಸಲು ಸಾಧ್ಯ?

ಒಮ್ಮೆ ಆ ವಸ್ತುವಿನ ರೂಪ, ಗುಣ, ಅದರ ಶಕ್ತಿ ಎಲ್ಲದರ ಅಚ್ಚು ಮನದೊಳಗಿಳಿಯಿತೆಂದರೆ ಅದನ್ನು ಊಹಿಸಿಕೊಳ್ಳಲು ಅದರ ಪ್ರತಿರೂಪ ನಮ್ಮೆದುರಿಗೆ ಇರಬೇಕಾಗಿಲ್ಲ.
ಇದ್ದರೂ ಅದರ ಹಿಂದಿನ ಗೂಡಾರ್ಥವನ್ನು ಮನಸ್ಸು ಅರ್ಥೈಸಿಕೊಳ್ಳುತ್ತದೆ.

ಆ ಸ್ಥಿತಿಗೆ ತಲುಪಿದಾಗ. ನಮಗೂ ನಿರಾಕಾರ, ನಿರ್ಗುಣ ಬ್ರಹ್ಮನನ್ನು ಉಪಾಸಿಸಲು ಸಾಧ್ಯ. ಇದೇ ಮಿಶ್ರಪದ್ಧತಿ ಸಾಧನೆಯ ಮೊದಲ ಹಂತ..

ಇಲ್ಲಿ ಸಾಧನೆಗಳ ಮುಖ್ಯ ಗುರಿ ಪರಿಪೂರ್ಣತೆ, ಮತ್ತು ಅತ್ಮ ಸಾಕ್ಷಾತ್ಕಾರವಾದುದರಿಂದ ಯಾವ ಮಾರ್ಗವನ್ನನುಸರಿಸಿದೆವು ಎನ್ನುವುದು ಗೌಣ. ಆದುದರಿಂದ ನಾನು ಮಾಡುತ್ತಿರುವುದು ಸರಿ, ಅವರದು ತಪ್ಪು ಎನ್ನುವ ಪ್ರಶ್ನೆ ಏಳುವುದೇ ಇಲ್ಲ.

ಈ ಮಿಶ್ರ ಪದ್ಧತಿಯಿಂದ ಅನೇಕ ಪ್ರಯೋಜನಗಳಿವೆ.
ಪೂಜೆಯಲ್ಲಿ ಉಪಯೋಗಿಸುವ ಬಣ್ಣ ಬಣ್ಣದ ಹೂವುಗಳು, ಸುಗಂದ ದೂಪ, ಮತ್ತು ಛಂದೋಭದ್ದವಾದ ಮಂತ್ರಗಳ ಉಚ್ಚಾರಣೆ ಇವುಗಳೆಲ್ಲಾ ನಮ್ಮ ಬಲ ಮಸ್ತಿಷ್ಕವನ್ನು ಉತ್ತೇಜಿಸಿ ತನ್ಮೂಲಕ ನಮ್ಮ ಅಂತದೃಷ್ಟಿ ಯನ್ನು ಜಾಗ್ರತಗೊಳಿಸುತ್ತದೆ.ಹಾಗಾಗಿ ಜನಸಾಮಾನ್ಯರು ಎಲ್ಲರೂ ಈ ಮಿಶ್ರಪಂಥವನ್ನೇ  ಶ್ರೀ ವಿದ್ಯಾ ಸಾಧನೆಗೆ ಆಯ್ಕೆ ಮಾಡಿಕೊಳ್ಳುತ್ತಾರೆ…

Untitled-15

ಮಾಸಗಳು

ಚಾಂದ್ರಮಾನ ಮಾಸಗಳು
ವರ್ಷದಲ್ಲಿ, ಕೆಲವು ನಕ್ಷತ್ರದ ಹೆಸರಿನೆ ಮೂಲಕ, ಚಾಂದ್ರಮಾನದ ಹನ್ನೆರಡು (12) ಮಾಸಗಳನ್ನು ಕೆಳಗೆ ನೀಡಿವೆ.

01. ಚೈತ್ರ (ಚಿತ್ರ/ಚಿತ್ತ); 2. ವೈಶಾಖ (ವಿಶಾಖ); 3. ಜ್ಯೇಷ್ಠ (ಜ್ಯೇಷ್ಠ); 4. ಆಷಾಢ (ಆಷಾಢ)5. ಶ್ರಾವಣ (ಶ್ರವಣ); 6. ಭಾದ್ರಪದ (ಭದ್ರ); : 7. ಆಶ್ವೀಜ (ಅಶ್ವಿನಿ); 8. ಕಾರ್ತೀಕ (ಕೃತ್ತಿಕ/ಕೃತ್ತಿಕೆ) 09. ಮಾರ್ಗಶಿರ (ಮೃಗಶಿರ); 10. ಪುಷ್ಯ (ಪುಷ್ಯ/ಪುಬ್ಬ); 11. ಮಾಘ (ಮಘ/ಮಖ); 12. ಫಾಲ್ಗುಣ (ಫಾಲ್ಗುಣಿ)

ಅಧಿಕ ಮಾಸಗಳು
ಸೂರ್ಯನು ಯಾವುದೇ ರಾಶಿಯಲ್ಲೂ ಪ್ರಯಾಣಿಸದೇ ಒಂದು ಚಾಂದ್ರಮಾನ ಮಾಸದಲ್ಲಿ ಸಂಪೂರ್ಣವಾಗಿ ಒಂದು ರಾಶಿಯ ಒಳಗೇ ಚಲಿಸುತ್ತದ್ದರೇ (ಅಂದರೆ ಅಮಾವಾಸ್ಯೆಗೆ ಮೊದಲು), ಆ ಚಾಂದ್ರಮಾನ ಮಾಸವನ್ನು ಮುಂಬರುವ ಮೊದಲ ಸಂಕ್ರಮಣದ ಪ್ರಕಾರ ಹೆಸರಿಸಲಾಗುತ್ತದೆ. ಅದು ಅಧಿಕ ಎಂಬ ಉಪಾಧಿಯನ್ನು ತೆಗೆದುಕೊಳ್ಳುತ್ತದೆ.

ಉದಾಹರಣೆಗೆ,

ಒಂದು ಚಾಂದ್ರಮಾನ ಮಾಸವು ಸಂಕ್ರಮಣವಿಲ್ಲದೆಯೇ ಸರಿದುಹೋದರೆ ಮತ್ತು ಮುಂದಿನ ಸಂಕ್ರಮಣವು ಮೇಷದಲ್ಲಿದ್ದರೆ, ಸಂಕ್ರಮಣವಿಲ್ಲದ ಆ ಮಾಸವನ್ನು ಅಧಿಕ ಚೈತ್ರವೆಂದು ಹೆಸರಿಸಲಾಗುತ್ತದೆ. ಸಂಕ್ರಮಣವಾಗಿರುವ ಮಾಸವನ್ನು ಶುದ್ಧ ಚೈತ್ರ ಅಥವಾ ನಿಜ ಚೈತ್ರ ಮಾಸವೆನ್ನುತ್ತಾರೆ.


ಮಲಮಾಸ : ಅಧಿಕಮಾಸ ಅಥವಾ ಕ್ಷಯಮಾಸ
ಶುದ್ಧಮಾಸ : ಒಂದು ಮಾಸವು 02 ಸಲ ಬಂದಾಗ ಮೊದಲ ಮಾಸವನ್ನು ಅಧಿಕಮಾಸವೆಂದೂ ಎರಡನೆಯ ಅದೇ ಮಾಸವನ್ನು ಶುದ್ಧಮಾಸವೆಂದು ಕರೆಯುತ್ತಾರೆ.

ಸೌರಮಾನ ಮಾಸಗಳು
ಸೂರ್ಯನು ಹನ್ನೆರಡು (೧೨) ರಾಶಿಗಳಲ್ಲಿ, ಒಂದು ರಾಶಿಯಿಂದ ಮುಂದಿನ ರಾಶಿಯಲ್ಲಿ ಪ್ರವೇಶ ಮಾಡುವತ್ತಾನೆ. ಇದನ್ನು ಸಂಕ್ರಮಣವೆನ್ನುತ್ತಾರೆ. ಓಂದು ರಾಶಿಯಲ್ಲಿರುವಾಗ ಆ ಮಾಸದ ಹೆಸರು, ರಾಶಿಯ ಹೆಸರನಿಂದ ಕರೆಯುತ್ತಾರೆ. ಹೀಗೆ ಸೌರಮಾನದ ಮಾಸಗಳು, ಹೇಗೆ ಕರೆಯಲಾಗಿದೆ.

೧. ಮೇಷ; ೨. ವೃಷಭ; ೩. ಮಿಥುನ; ೪. ಕರ್ಕ; ೫. ಸಿಂಹ; ೬. ಕನ್ಯ ೭. ತುಲ; ೮. ವೃಷ್ಚಿಕ; ೯. ಧನು; ೧೦. ಮಕರ; ೧೧. ಕುಂಭ; ೧೨, ಮೀನ

ಸೂರ್ಯನ ಧನು ಸಂಕ್ರಮಣ ದಿಂದ ಮಕರಸಂಕ್ರಮಣ ವರೆಗೆ ಬರುವ ಮಾಸವನ್ನು ಧನುರ್ಮಾಸವೆಂತ ಕರೆಯಲಾಗಿದೆ. ಈ ಮಾಸ ಧರ್ಮ ಶಾಸ್ತ್ರದಲ್ಲಿ ವಿಶೇಷವಾದದ್ದು.

ಋತುಗಳು 06 (2 ಮಾಸಗಳಿಗೆ ಒಂದು ಋತು)
1. ವಸಂತ ಋತು (ಚೈತ್ರ – ವೈಶಾಖ)
2. ಗ್ರೀಷ್ಮ ಋತು (ಜ್ಯೇಷ್ಠ – ಆಷಾಢ)
3. ವರ್ಷ ಋತು (ಶ್ರಾವಣ – ಭಾದ್ರಪದ)
4. ಶರದೃತು (ಆಶ್ವೀಜ – ಕಾರ್ತೀಕ)
5. ಹೇಮಂತ ಋತು (ಮಾರ್ಗಶಿರ – ಪುಷ್ಯ)
6. ಶಿಶಿರ ಋತು (ಮಾಘ – ಪಾಲ್ಗುಣ)

Untitled-14 (2)

ಮುಹೂರ್ತ ನಿರ್ಣಯ : ಪ್ರದೋಷದ ಮಹತ್ವ

ಪ್ರದೋಷವೆಂದರೆ ಮುಸ್ಸಂಜೆಯೆಂಬುದು ಪ್ರಸಿದ್ಧವಾದ ಅರ್ಥ.

ಆದರೆ ಪಂಚಾಂಗದಲ್ಲಿ ಇದನ್ನು ಪಾರಿಭಾಷಿಕವಾಗಿ ಬಳಸಿದೆ. ಷಷ್ಠೀ ಚತುರ್ಥೀ ದ್ವಾದಶಿಗಳಂದು ಪ್ರದೋಷವಿರುವುದಾದರೂ ಪ್ರಸಿದ್ಧವಾದ ದ್ವಾದಶಿಯ ಪ್ರದೋಷವನ್ನು ಮಾತ್ರ ಇಲ್ಲಿ ಪರಿಚಯಿಸುತ್ತೇನೆ.

ರಾತ್ರೌ ಯಾಮದ್ವಯಾದರ್ವಾಕ್ ಸಪ್ತಮೀಸ್ಯಾತ್ ತ್ರಯೋದಶೀ |
ಪ್ರದೋಷ ಸತು ವಿಜ್ಞೇಯಃ ಸರ್ವವಿದ್ಯಾ ವಿಗರ್ಹಿತಃ ||


ಎಂಬ ವೃದ್ಧ ಗರ್ಗರ ಪ್ರಮಾಣ ವಾಕ್ಯದಂತೆ ರಾತ್ರಿ 02 ಯಾಮಗಳು ಮುಗಿಯುವುದಕ್ಕೆ ಮೊದಲೇ ತ್ರಯೋದಶಿಯು ಪ್ರಾರಂಭವಾದರೆ ಪ್ರದೋಷವೆಂದು ತಿಳಿಯಬೇಕು. ಪ್ರದೋಷಕಾಲದಲ್ಲಿ ವೇದಾದಿಗಳ ಅಧ್ಯಯನವನ್ನು ಮಾಡಬಾರದು. ದ್ವಾದಶಿಯಂದು ರಾತ್ರಿಯೇ ತ್ರಯೋದಶಿಯು ಒದಗುವುದರಿಂದ ದ್ವಾದಶಿಯಂದೇ ಪ್ರದೋಷವಿರುತ್ತದೆ. ಈ ಪ್ರದೋಷಕಾಲವು ಸೂರ್ಯಾಸ್ತಕ್ಕಿಂತ ಪೂರ್ವಾಪರಗಳಲ್ಲಿ ಸಾಮಾನ್ಯವಾಗಿ 03 ಗಂಟೆಗಳಿರುತ್ತದೆ. ದ್ವಾದಶಿಯಂದು ಸಾಯಂಕಾಲ 06 ಗಂಟೆಗೆ ಸೂರ್ಯಾಸ್ತವಾಗುವುದೆಂದು ಭಾವಿಸಿದರೆ ಮಧ್ಯಾಹ್ನ 03 ಗಂಟೆಯಿಂದ ರಾತ್ರಿ 09 ಗಂಟೆಯವರೆಗೆ ಪ್ರದೋಷವಿದೆಯೆಂದು ತಿಳಿಯಬಹುದು.

ದ್ವಾದಶಿಯಂದು ಹರಿವಾಸರವಿದ್ದರೆ ಅಂದು ಪ್ರದೋಷವಿರುವುದಿಲ್ಲ. ಏಕೆಂದರೆ ಅಂದು ಪ್ರಾತಃಕಾಲದಲ್ಲಿ ತಾನೇ ಪ್ರಾರಂಭವಾಗಿರುವ ದ್ವಾದಶಿಯು ರಾತ್ರಿ ಕಾಲದಲ್ಲಿ ಮುಂದುವರಿಯುವುದರಿಂದ ಯಾಮದ್ವಯದಲ್ಲಿ ತ್ರಯೋದಶಿ ಪ್ರವೇಶದ ಸಾಧ್ಯತೆ ಇರುವುದಿಲ್ಲ. ಅಂತಹಾ ಸಂದರ್ಭದಲ್ಲಿ ತ್ರಯೋದಶಿಯಂದೇ ರಾತ್ರಿಯಲ್ಲಿ ತ್ರಯೋದಶಿಯು ಸಿಗುವುದರಿಂದ ಅಂದೇ ಪ್ರದೋಷವಿರುವುದನ್ನು ಪಂಚಾಂಗದಲ್ಲಿ ಕಾಣಬಹುದಾಗಿದೆ. ಹೀಗೆಯೇ ಷಷ್ಠೀ ಅಥವಾ ಸಪ್ತಮಿಯಂದೂ ಪ್ರದೋಷವಿರುತ್ತದೆ.

image-1

ಅತೀಂದ್ರಿಯ ಶಕ್ತಿಗಳೊಡನೆ ಮನುಷ್ಯನ ಸಂಪರ್ಕ-ಶ್ರೀ ಮಧು ಚಿನ್ನಪ್ಪ

ಮನುಷ್ಯ ತನ್ನ ಕಣ್ಣಿಗೆ ಕಾಣುವ ಶರೀರವನ್ನು ಹೊರತುಪಡಿಸಿ ಇನ್ನು ಹಲವು ಸೂಕ್ಷ್ಮ ಶರೀರಗಳನ್ನು ಹೊಂದಿರುತ್ತಾನೆ, ಈ ಐಹಿಕ ಪ್ರಪಂಚದಲ್ಲಿ ತಾನು ದೈಹಿಕವಾಗಿ ಮಾಡುವಂತಹ ಕೆಲಸಗಳಿಗಾಗಿ ಪಂಚಭೂತಾತ್ಮಕವಾದಂತ ಈ ಪ್ರಪಂಚದಲ್ಲಿ ಯಾವುದನ್ನಾದರೂ ಮಾಡಲು ಅಥವಾ ಅನುಭವಿಸಲು ಅನುಭವಕ್ಕೆ ತಂದುಕೊಳ್ಳಲು ಪಂಚಭೂತತ್ಮಕವಾದಂತ ರಕ್ತ ಮಾಂಸಗಳಿಂದ ರಚಿತಲ್ಪಟ್ಟ ಅನ್ನಮಯವಾದ ಆಹಾರದಿಂದ ಖುಷಿಸಲ್ಪಟ್ಟ ಈ ಶರೀರವನ್ನು ಉಪಯೋಗಿಸುತ್ತಾನೆ.

ಆದರೆ ತನ್ನ ಕಣ್ಣುಗಳಿಗೆ ದೇಹಕ್ಕೆ ಅನುಭವವಾಗದೆ ಇರುವಂತಹ ಎಷ್ಟು ಶಕ್ತಿಗಳು ಈ ಭೂಮಿ ಮೇಲೆ ಇರುತ್ತದೆ ಅಂತ ಶಕ್ತಿಗಳನ್ನು ತನ್ನ ಅನುಭವಕ್ಕೆ ತಂದುಕೊಳ್ಳಲು ಮನುಷ್ಯನು ತನ್ನ ಅನ್ನಮಯ್ಯ ಕೋಶವನ್ನು ಮೀರಿ ಮುಂದೆ ಸಾಗಿ ಮನೋಮಯ ಕೋಶವನ್ನು ತಲುಪ ಬೇಕಾಗಿರುತ್ತದೆ.

ಇದು ಸಾಮಾನ್ಯ ಮನುಷ್ಯರಿಗೆ ನಿದ್ರೆಯಲ್ಲೂ, ಆಳವಾದ ಧ್ಯಾನ ಪೂಜೆ ಮಾಡುವ ಸಮಯದಲ್ಲೂ ಅನುಭವಕ್ಕೆ ಬರುತ್ತದೆ ಆದರೆ ಕೆಲವೊಂದು ಮನುಷ್ಯರಿಗೆ ತಾವು ಹಿಂದಿನ ಜನ್ಮದಲ್ಲಿ ಮಾಡಿರತಕ್ಕಂತ ಅಗಾಧವಾದ ಸಾಧನೆ ಜಪ-ತಪಗಳಿಂದ ಅದು ಈ ಜನ್ಮಕ್ಕೆ ಬಂದಿರುತ್ತದೆ. ಆದರೆ ಸಾಮಾನ್ಯವಾಗಿ ಎಲ್ಲರಿಗೂ ಅವರಿಗೆ ತಿಳಿಯದ ಹಾಗೆ ರಹಸ್ಯವಾಗಿ ಉಳಿದಿರುತ್ತದೆ.

ಹಿಂದಿನ ಜನ್ಮದಲ್ಲಿ ಅಪೂರ್ಣವಾದ ಸಾಧನೆ ಅಥವಾ ಆ ಸಾಧನೆಯ ಫಲವನ್ನು ಪ್ರಕೃತಿ ವಿರುದ್ಧವಾಗಿ ಬಳಸಿದಾಗ ಅವರು ಈ ಜನ್ಮದಲ್ಲಿ ಅದನ್ನು ಮರೆತಿರುತ್ತಾರೆ ಆದರೆ ಅವರ ಮನೋಮಯ ಕೋಶದಲ್ಲಿ ಹಿಂದಿನ ಜನ್ಮದ ಸಾಧನೆ ಫಲ ಹಾಗೆ ಉಳಿದಿರುತ್ತದೆ ಅವರ ಮನೋಮಯ ಕೋಶವು ಈ ವಿಚಾರಗಳಿಗೆ ಸದಾ ತೆರೆದುಕೊಂಡಿರುತ್ತದೆ ಮತ್ತು ಪ್ರಕೃತಿಯಲ್ಲಿನ ಅಂತಹ ಶಕ್ತಿಯನ್ನು ಅದು ಆಹ್ವಾನಿಸುತ್ತಿರುತ್ತದೆ ಅಥವಾ ಅದರಿಂದ ಪ್ರಚೋದಿಸಲ್ಪಡುತ್ತದೆ.

ಅವರ ಹಿಂದಿನ ಜನ್ಮದ ಸಾಧನೆಯ ಫಲದಿಂದ ಈ ಜನ್ಮದಲ್ಲಿ ಅವರು ಕೇವಲ ಸಂಕಲ್ಪದಿಂದ ಚಿಕ್ಕ ಪುಟ್ಟ ಮಂತ್ರಗಳ ಉಚ್ಚಾರದಿಂದ ಆ ಶಕ್ತಿಯನ್ನು ಪ್ರೇರೇಪಿಸಿ ಅವುಗಳಿಗೆ ನಿರ್ದಿಷ್ಟ ಆಕಾರ ಮತ್ತು ಗುರಿಯನ್ನು ನೀಡಿ ಈ ಜನ್ಮದಲ್ಲಿ ವ್ಯಕ್ತಿಯು ತಮ್ಮ ನಿಶ್ಚಿತ ಕಾರ್ಯಗಳನ್ನು ಪೂರೈಸಿಕೊಳ್ಳಬಹುದು

ಜ್ಯೋತಿಷ್ಯ ಶಾಸ್ತ್ರದಲ್ಲಿ ಮನೋವಮಯ ಕೋಶವನ್ನು ನಾವು ಚಂದ್ರರಿಗೆ ಹೋಲಿಸುತ್ತೇವೆ ಹಾಗೂ ಹಿಂದಿನ ಜನ್ಮದ ಕರ್ಮಫಲಗಳನ್ನು ಹೊತ್ತು ತಂದಿರುವಂತಹ ಗ್ರಹಗಳಾದ ರಾಹು-ಕೇತುರವರು ಎಂದು ತಿಳಿಯುತ್ತೇವೆ. ಇಲ್ಲಿ ರಾಹು ಕೇತುರವರು ಚಂದ್ರರಿಗೆ ಸಂಯೋಗವಾದಾಗ ತಮ್ಮ ಹಿಂದಿನ ಜನ್ಮದ ಕರ್ಮಫಲಗಳನ್ನು ಸಹ ನೇರವಾಗಿ ಮನೋಮಯ ಕೋಶಕ್ಕೆ ತಲುಪಿಸಿರುತ್ತಾರೆ. ಇದರಿಂದ ಈ ಜನ್ಮದಲ್ಲಿ ಜಾತಕರ ಮನೋಮಯ ಕೋಶವು ಇಂತಹ ವಿಚಾರಗಳಿಗೆ ಸದಾ ತೆರೆದಿರುತ್ತದೆ ಇದರಲ್ಲಿಯೂ ಸಹ ಎರಡು ವಿಧಗಳಾಗಿ ಇರುತ್ತದೆ

1. ದುಷ್ಟ ಶಕ್ತಿಗಳು ಅಥವಾ ದುಷ್ಟಾತ್ಮಗಳು

ಇಂತಹ ಶಕ್ತಿಗಳು ಅಥವಾ ಆತ್ಮಗಳು ಜಾತಕರಲ್ಲಿ ಚಂದ್ರರಿಗೆ ರಾಹುರವರ ನೇರ ಸಂಯೋಗ ಉಂಟಾದಾಗ ಇಂತಹ ಶಕ್ತಿಗಳು ಜಾತಕರನ್ನು ನೇರವಾಗಿ ಪ್ರೇರೇಪಿಸುತ್ತವೆ ಹಾಗೂ ಜಾತಕರು ಸಹ ಇಂತಹ ಶಕ್ತಿಗಳಿಂದ ಸದಾ ಅನುಭವಸ್ಥರಾಗಿರುತ್ತಾರೆ.

ಕೆಲವೊಂದು ಸಂದರ್ಭದಲ್ಲಿ ಅಜ್ಞಾನದಿಂದ ಅವರಿಗೆ ಏನಾಗುತ್ತಿರುತ್ತದೆ ಎಂದು ತಿಳಿಯುವುದಿಲ್ಲ, ಅವರು ತ್ರಿಸಂಧ್ಯ ಕಾಲಗಳಲ್ಲಿ ಬಯಲು ಪ್ರದೇಶಗಳಿಗೆ ಅಥವಾ ಮನೆಯಿಂದ ಹೊರಗಡೆ/ವಾಸ ಪ್ರದೇಶಗಳಿಂದ ಹೊರಗಡೆ ಹೋದಾಗ ಇದರಿಂದ ಪಿಡಿತರು ಅಥವಾ ಅನುಭವಸ್ಥರಾಗುತ್ತಾರೆ.

ಇವರು ಹಿಂದಿನ ಜನ್ಮದಲ್ಲಿ ತಾಮಸಿಕ ಹಾದಿಯಲ್ಲಿ ತಮ್ಮ ಸಾಧನೆಯನ್ನು ಮಾಡಿದ್ದು ರಾಹುರವರು ತಮ್ಮ ಹಿಂದಿನ ಜನ್ಮದ ಸಾಧನೆಯ ಫಲಗಳನ್ನು ಈ ಜನ್ಮದಲ್ಲಿ ಹೊತ್ತು ತಂದು ಮನೋಮಯ ಕೋಶವಾದ ಚಂದ್ರರಿಗೆ ಕೊಟ್ಟಿರುತ್ತಾರೆ ಇದರಿಂದ ಜಾತಕರ ಮನೋಮಯಕೋಶವು ಇಂತಹ ಶಕ್ತಿಗಳಿಗೆ ಸದಾ ತೆರೆದುಕೊಂಡು ತೆರೆದುಕೊಂಡಿರುತ್ತದೆ.

ಇಂತಹ ಸಂಯೋಗ ಇರುವಂತ ವ್ಯಕ್ತಿಗಳು ಸರ್ಪಗಳಿಗೆ ಹೆಚ್ಚು ಸಂವೇದನಾಶೀಲರಾಗಿದ್ದು ಸರ್ಪಗಳು ಕೂಡ ಇವರಿಗೆ ಪ್ರತಿಕ್ರಿಸುತ್ತಿರುತ್ತದೆ ಇವರ ಕನಸುಗಳಲ್ಲಿ ಹೆಚ್ಚು ಸರ್ಪಗಳು ಕಾಣಿಸಿಕೊಳ್ಳುವುದು ಅಥವಾ ಇವರು ಹೋದ ಕಡೆಗಳಲ್ಲಿ ಸರ್ಪಗಳು ಕಾಣಿಸಿಕೊಳ್ಳುವುದು ನಡೆಯುತ್ತಿರುತ್ತದೆ.

ಇವರು ಈ ಜನ್ಮದಲ್ಲಿ ಕೇವಲ ಸಂಕಲ್ಪಿಸಿದ್ದಲ್ಲಿ ಅಥವಾ ಇವರಿಗೆ ತೋಚಿದ ಮಂತ್ರಗಳನ್ನು ಜಪಿಸುದ್ದಲ್ಲಿ ಇಂತಹ ಶಕ್ತಿಗಳು ಪ್ರಚೋದನೆಗೊಳ್ಳುತ್ತವೆ ಇವರ ಬಳಿ ಬರುತ್ತವೆ.

ಇವರು ತಮಗೆ ಏನಾದರೂ ಕಾರ್ಯ ಆಗಬೇಕಾದರೆ ಅಥವಾ ಕಷ್ಟಗಳಿಗೆ ಸಿಲುಕಿಕೊಂಡಾಗ ಇವರು ಕಣ್ಮುಚ್ಚಿ ಮನಸ್ಸಿನಲ್ಲಿ ಯಾವುದೋ ಇಂತಹ ಶಕ್ತಿ ಬಂದು ತನ್ನನ್ನು ಆಶೀರ್ವದಿಸುತ್ತಿರುವ ಹಾಗೆ ತನ್ನ ಕಾರ್ಯ ಸಂಕಲ್ಪ ಸಿದ್ಧಿ ಹೊಂದಿದ ಹಾಗೆ ನೆನೆಸಿದರು ಕೂಡ ಇಂತಹ ಆತ್ಮಗಳು ಅಥವಾ ಶಕ್ತಿ ಬಂದು ಅವರ ಕಾರ್ಯವನ್ನು ಪೂರ್ಣ ಮಾಡಿಕೊಡುತ್ತದೆ

ಈ ಶಕ್ತಿ ಅಥವಾ ಈ ಆತ್ಮಗಳಿಗೆ ತಮ್ಮ ಆಯಾಮದಲ್ಲಿ ಯಾವುದೇ ನಿರ್ಬಂಧಗಳು ಕಾನೂನು ಚೌಕಟ್ಟುಗಳು ಇರುವುದಿಲ್ಲ ಇವು ತಮಗೆ ಇಷ್ಟ ಬಂದ ಹಾಗೆ ವರ್ತಿಸುತ್ತಿರುತ್ತದೆ ಜಾತಕನ ಸಂಕಲ್ಪಿತ ಕಾರ್ಯಗಳನ್ನು ಅತ್ಯಂತ ಶೀಘ್ರದಲ್ಲಿ ಯಾವುದೇ ಒಂದು ದಾರಿಯಿಂದ ಮಾಡುತ್ತದೆ.

ಈ ಜನ್ಮದಲ್ಲಿ ಇವರಿಗೆ ಇದರ ಜ್ಞಾನ ಇಲ್ಲದೆ ಇರುವುದರಿಂದ ಇದನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳಲು ಇವರಿಗೆ ತಿಳಿದಿರುವುದಿಲ್ಲ ಇದನ್ನು ಕೆಟ್ಟ ಸಂಕೇತವೆಂದು ತಿಳಿದು ಭಯಪಡುತ್ತಿರುತ್ತಾರೆ, ಇದು ಭಯಪಡುವ ಅವಶ್ಯಕತೆ ಇಲ್ಲ ಸೂಕ್ತ ಜ್ಞಾನದಿಂದ ತಮ್ಮ ಅಜ್ಞಾನವನ್ನು ಹೋಗಲಾಡಿಸಿಕೊಂಡು ಇದನ್ನು ಒಳ್ಳೆಯ ರೀತಿ ಬಳಸಿಕೊಳ್ಳಬಹುದು.

2.ದೈವಿಕ ಶಕ್ತಿ ಅಥವಾ ದೈವಿಕ ಆತ್ಮಗಳು

ಇಂತಹ ಶಕ್ತಿಗಳು ಜಾತಕನ ಹಿಂದಿನ ಜನ್ಮದಲ್ಲಿ ಸಾತ್ವಿಕ ದಾರಿಯಲ್ಲಿ ಸಾಧನೆ ಜಪ-ತಪಗಳನ್ನು ಮಾಡಿದಲ್ಲಿ ಮತ್ತು ಹಿಂದಿನ ಜನ್ಮದಲ್ಲಿ ಅದನ್ನು ಸರಿಯಾದ ದಾರಿಯಲ್ಲಿ ಉಪಯೋಗಿಸಿಕೊಳ್ಳದೆ ಇದ್ದಲ್ಲಿ ಅದರ ಕರ್ಮಫಲವು ಈ ಜನ್ಮದಲ್ಲಿ ಜಾತಕರಿಗೆ ಕೇತುವಿನಿಂದ ದೊರೆತಿರುತ್ತದೆ.

ಯಾವ ಜಾತಕರಿಗೆ ಜಾತಕದಲ್ಲಿನ ಚಂದ್ರರಿಗೆ ಕೇತುರವರ ನೇರ ಸಂಯೋಗ ಉಂಟಾದಾಗ ಅಂತಹ ಜಾತಕರಲ್ಲಿ ಇಂತಹ ದೈವಿಕ ಶಕ್ತಿ ಅಥವಾ ದೈವಿ ಆತ್ಮಗಳನ್ನು ಪ್ರೇರೇಪಿಸುವ ಶಕ್ತಿ ಮನಸ್ಸಿಗೆ ಬಂದಿರುತ್ತದೆ ಇಂತಹ ಜಾತಕರು ದೈವಿ ಶೆಕ್ತಿಗಳನ್ನು ಮಂತ್ರ ಮತ್ತು ಸ್ತೋತ್ರಗಳಿಂದ ಪೂಜಿಸಿ ತಮ್ಮ ಮನಸ್ಸಿನಲ್ಲಿ ನಿಶ್ಚಿತ ಕಾರ್ಯಗಳನ್ನು ದೈವಿಶಕ್ತಿಯು ಬಂದು ಪೂರೈಸುತ್ತಿದೆ ಎಂದು ತಿಳಿದು ಸಂಕಲ್ಪಿಸಿದ್ದಲ್ಲಿ ಅಂತಹ ಕಾರ್ಯಗಳನ್ನು ದೈವಿ ಶಕ್ತಿಯು ಪೂರೈಸುತ್ತದೆ

ಇಂತಹ ದೈವೀಶಕ್ತಿ ಆತ್ಮಗಳಿಗೆ ನಿರ್ಬಂಧಗಳು ಇರುತ್ತವೆ, ಇವು ತಮಗೆ ಇಚ್ಚೆ ಬಂದಹಾಗೆ ಕೆಲಸ ಮಾಡುವುದಿಲ್ಲ.

ವ್ಯಕ್ತಿಯ ಜಾತಕ ಇಲ್ಲದಿದ್ದರೂ ಇಂಥವರ ಜೀವನದಲ್ಲಿ ನಡೆಯುವ ಕೆಲವೊಂದು ಅನುಭವಗಳಿಂದ ಇಂಥವರನ್ನು ಸುಲಭವಾಗಿ ಗುರುತಿಸಬಹುದು

1. ಇವರ ಕನಸಿನಲ್ಲಿ ಹಾವುಗಳು, ಸತ್ತ ವ್ಯಕ್ತಿಗಳ ದೇಹಗಳು ಆಗಾಗ ಕಾಣಿಸಿಕೊಳ್ಳುವುದು.

2. ಅಮಾವಾಸೆ ಹುಣ್ಣಿಮೆಗಳಲ್ಲಿ ವಿಚಿತ್ರ ಅನುಬವಗಳು ಆಗುವುದು.

3. ಮನೆಯಲ್ಲಿ ಒಂಟಿಯಾಗಿದ್ದಾಗ ಯಾರೋ ಬಂದಂತೆ, ಸುಳಿದಾಡಿದಂತೆ ಅನಿಸುವುದು.

4. ತಮ್ಮ ಜೀವನದಲ್ಲಿ ಏನಾದರೂ ಒಳ್ಳೆಯದು ಅಥವಾ ಕೆಟ್ಟದ್ದು ನಡೆಯುವ ಮುಂಚೆ ಅವರ ಕನಸಿನಲ್ಲಿ ಯಾರೋ ವ್ಯಕ್ತಿಗಳು ಅಥವಾ ಸರ್ಪಗಳು ಬಂದು ಅದಕ್ಕೆ ತಕ್ಕ ಸೂಚನೆಗಳನ್ನು ಸೂಚನೆಗಳನ್ನು ನೀಡುವುದು

5.ಅವರ ಜೀವನದಲ್ಲಿ ಇದ್ದಕ್ಕಿದ್ದ ಹಾಗೆ ಅವರ ಶಕ್ತಿ ಮೀರಿ ಏನಾದರೂ ದೈಹಿಕವಾಗಿ, ಆರ್ಥಿಕವಾಗಿ ಬದಲಾವಣೆಗಳು ಆಗುವುದು

6.ಸದಾ ಸುಸ್ತು, ನನ್ನ ಕೈಯಲ್ಲಿ ಆಗುವುದಿಲ್ಲ ಎಂದು ಹೇಳುವ ವ್ಯಕ್ತಿ ಇದ್ದಕ್ಕಿದ್ದ ಹಾಗೆ ಕಾರ್ಯಗಳನ್ನು ಮಾಡಲು ನಿಲ್ಲುವುದು

7.ಇಂತಹ ವ್ಯಕ್ತಿಗಳ ಅತವ ಅವರ ಮಕ್ಕಳುಗಳ ಕಣ್ಣುಗಳು ಸಾಮಾನ್ಯರ ಕಣ್ಣುಗಳಿಗಿಂತ ಭಿನ್ನವಾಗಿದ್ದು ಕೆಲವೊಂದು ಬಾರಿ ಬೆಕ್ಕಿನ ಅಥವಾ ನಾಯಿಯ ಕಣ್ಣುಗಳನ್ನು ಹೋಲುತ್ತಿರುತ್ತದೆ

8.ಇಂತಹ ವ್ಯಕ್ತಿಗಳಿಗೆ ಸುತ್ತಲೂ ಇರುವಂತ ಯಾರಾದರೂ ಜನರು ಅವರಿಗೆ ತೊಂದರೆ ಕೊಟ್ಟಲ್ಲಿ ಕೆಲವೇ ದಿನಗಳ ಅಂತರದಲ್ಲಿ ತೊಂದರೆ ಕೊಟ್ಟಂತಹ ವ್ಯಕ್ತಿಗಳಿಗೆ ಏನಾದರೂ ದೈಹಿಕವಾಗಿ ಅಥವಾ ಆರ್ಥಿಕವಾಗಿ ನಷ್ಟ ಉಂಟಾಗುತ್ತದೆ

9. ಸಾಮಾನ್ಯ ಮನುಷ್ಯರು ಮಾಡಲಾಗದಂತಹ ಕೆಲಸ ಕಾರ್ಯಗಳನ್ನು ಇಂತಹ ಶಕ್ತಿಯನ್ನು ಹೊಂದಿರುತಕ್ಕಂತಹ ವ್ಯಕ್ತಿಗಳು ಮಾಡುತ್ತಿರುತ್ತಾರೆ ಉದಾಹರಣೆಗೆ ಹಿಂದಿನ ಕಾಲದಲ್ಲಿ ಬೃಹದಾಕಾರದ ದೇವಸ್ಥಾನಗಳ ನಿರ್ಮಾಣ ಕಾರ್ಯಗಳಲ್ಲಿ ಇಂತಹ ಶಕ್ತಿಗಳನ್ನು ಮನುಷ್ಯರಲ್ಲಿ ಆಹ್ವಾನಿಸಿ, ದೊಡ್ಡ ಗಾತ್ರದ ಕಲ್ಲುಗಳನ್ನು ದೇವಸ್ಥಾನ ಗೋಪುರ – ಆವರಣಗಳ ನಿರ್ಮಾಣಗಳಲ್ಲಿ ಬಳಸಿ ನಂತರ ಈ ಶಕ್ತಿಗಳನ್ನು ಅವರ ದೇಹದಿಂದ ಉಚ್ಛಾಟಿಸಲಾಗುತ್ತಿತ್ತು, ಆಹ್ವಾನಿಸಿದ ಶಕ್ತಿಗಳು ದೇವಸ್ಥಾನದ ಆವರಣದಲ್ಲಿ ಉಳಿದುಕೊಳ್ಳುವುದರಿಂದ ಅವುಗಳ ಪೂಜೆಗಾಗಿ ದೇವಸ್ಥಾನದ ಆವರಣದ ಸುತ್ತಲೂ ಬಲಿಪೀಠಗಳನ್ನು ನಿರ್ಮಿಸಿ ಅವುಗಳಿಗೆ ಪೂಜೆ ಮತ್ತು ಬಲಿಗಳನ್ನು ಇಂದಿಗೂ ಸಹ ನಿತ್ಯ ಪೂಜಾ ಕೈಂಕರ್ಯದಲ್ಲಿ ಮಾಡಲಾಗುತ್ತದೆ.

10. ವಿಚಿತ್ರವೆಂದರೆ ಈ ಜನ್ಮದಲ್ಲಿ ಇವರು ಸಾಮಾನ್ಯವಾಗಿ ಯಾವುದೇ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ತಾವು ಸಹ ಪೂಜೆಗಳನ್ನು ಮಾಡಲು ಇಂತಹ ವ್ಯಕ್ತಿಗಳು ಇಷ್ಟಪಡುವುದಿಲ್ಲ.

11.ಇಂತಹ ವ್ಯಕ್ತಿಗಳು ತ್ರಿಸಂದ್ಯಾ ಸಮಯದಲ್ಲಿ ಸ್ಮಶಾನ, ಬಯಲು ಪ್ರದೇಶಗಳು, ಗ್ರಾಮದಿಂದ ಹೊರಗಡೆ ಹೋದಾಗ ಇಂತಹ ಶಕ್ತಿಗಳಿಂದ ಪೀಡಿಸಲ್ಪಡುತ್ತಾರೆ ಇದರ ಪ್ರಭಾವ ಕೆಲವು ದಿನಗಳಿಂದ ಕೆಲವು ತಿಂಗಳಗಳವರೆಗೂ ಇರುತ್ತದೆ

12.ನಾಯಿಗಳು ಅಥವಾ ಪ್ರಾಣಿಗಳು ಇವರನ್ನು ನೋಡಿದಾಗ ವಿಚಿತ್ರವಾಗಿ ವರ್ತಿಸುತ್ತವೆ.

ಇದು ಕೇಲವಲ ಪ್ರಮುಖವಾದ ಸಂದರ್ಬಗಳಾಗಿದ್ದು, ಬೇರೆ ಬೇರೆ ವ್ಯಕ್ತಿಗಳಿಗೆ ಇನ್ನೂ ಬೇರೆಯತರಹದ ಅನುಭವಗಳಾಗಿರುತ್ತದೆ. ಇದನ್ನು ಜಾತಕದಲ್ಲಿ ನಿಖರವಾಗಿ ತಿಳಿಯಬಹುದ್ದಾದ್ದರಿಂದ ಇಂತಹ ಅನುಬವಗಳನ್ನು ಹೊಂದಿದ ಕೂಡಲೇ ಸೂಕ್ತ ದೈವಗ್ನರ/ಜ್ಯೋತಿಶಿಗಳ ಬಳಿಜಾತಕವನ್ನು ಪರೀಕ್ಷಿಸಿಕೊಳ್ಳುವುದು ಸೂಕ್ತವಾದ್ದು.

ಇದಕ್ಕೆ ಪರಿಹಾರವೇನು?

ಮೊದಲಿಗೆ ಜಾತಕರು ಸೂಕ್ತ ದೈವಗ್ನರ ಬಳಿ ತಮ್ಮ ಜಾತಕದಲ್ಲಿ ಇಂತಹ ಸಂಯೋಗಗಳು, ಯೋಗಗಳು ಇದ್ದಾವೆಯೇ ಎಂದು ಮೊದಲು ಪರೀಕ್ಷಿಸಿ ಕೊಳ್ಳಬೇಕು ನಂತರ ಇದಕ್ಕೆ ಸಂಬಂಧಪಟ್ಟ ಜ್ಞಾನವನ್ನು ಪಡೆದುಕೊಂಡು ಅಂತಹ ಶಕ್ತಿಗಳನ್ನು ಇವರು ಆರಾಧಿಸಿ ಅವುಗಳಿಂದ ರಕ್ಷಣೆಯನ್ನು ಮತ್ತು ಸಂಕಲ್ಪಿತ ಕಾರ್ಯಗಳನ್ನು ಮಾಡಿಸಿಕೊಳ್ಳುವ ಮಾರ್ಗವನ್ನು ತಿಳಿಯಬೇಕು.

ಅವುಗಳ ತಂಟೆಗೆ ಹೋಗದೆ ಮತ್ತು ಸಮಯ ಸಂದರ್ಭ ಸ್ಥಳಗಳನ್ನು ಅರಿತು ಓಡಾಡಬೇಕು, ಬೇರೆಯವರಿಗೆ ಕೆಟ್ಟದ್ದನ್ನು ಬಯಸಬಾರದು ಶಾಪ ಹಾಕಬಾರದು ಏಕೆಂದರೆ ಹಿಂದಿನ ಜನ್ಮದಲ್ಲಿ ಇದರ ದುರುಪಯೋಗಪಡಿಸಿಕೊಂಡು ಈ ಜನ್ಮದಲ್ಲಿ ಇದನ್ನು ಪಡೆದಿರುತ್ತಾರೆ.

ಚಂದ್ರ ಕೇತು ಸಂಯೋಗ ಇರುವವರು ಬೇರೆಯವರಿಗೆ ಕೆಟ್ಟದ್ದನ್ನು ಬಯಸದೆ ಶಾಪವನ್ನು ಹಾಕದೆ ಇರುವುದು ಇವರ ಶಾಪಗಳು ಬೇರೆಯವರಿಗೆ ಅತಿ ಬೇಗನೆ ತಟ್ಟುತ್ತದೆ.

ಚಂದ್ರ ರಾಹು ಸಂಯೋಗ ಇರುವವರು ತಮ್ಮ ಸಂಕಲ್ಪ ಕಾರ್ಯಗಳನ್ನು ನೆರವೇರಿಸಲು ಅಥವಾ ಸುಖ ಜೀವನವನ್ನು ನಡೆಸಲು ತಮ್ಮ ಜಮೀನಿನಲ್ಲಿ ನಾಗರಕಟ್ಟೆಗಳನ್ನು ನಾಗರ ಕಲ್ಲುಗಲನ್ನು ಸ್ಥಾಪಿಸುವುದು.

ಶಿವಂಗುರೂಜಿ

ಮನುಷ್ಯನ ಜೀವನದಲ್ಲಿ ಸುಖದ ದಿನಗಳು ಮತ್ತು ಕಷ್ಟದ ಜೀವನಗಳು – ಶ್ರೀ ಮಧು ಚಿನ್ನಪ್ಪ

ಮನುಷ್ಯ ಭೂಮಿಗೆ ಬರುವಾಗ ಕರ್ಮಫಲಕ್ಕೆ ತಕ್ಕ ಹಾಗೆ ಆತ ತನ್ನ ಇಂದ್ರಿಯಗಳನ್ನು ಹೊತ್ತು ತಂದಿರುತ್ತಾನೆ. ಇವುಗಳು ದೈಹಿಕವಾಗಿ ಆತನ ದೇಹದಲ್ಲಿ ಅವನ ಕರ್ಮನುಸಾರವಾಗಿ ರೂಪುಗೊಂಡಿರುತ್ತದೆ ಆತನ ಒಳ್ಳೆಯ ಕರ್ಮಗಳಿಗೆ ಅನುಸಾರವಾಗಿ ಇಂದ್ರಿಯಗಳು ಆರೋಗ್ಯಕರವಾಗಿಯೂ ಮತ್ತು ಆತನ ಕೆಟ್ಟ ಕರ್ಮಫಲಗಳಿಗೆ ಅನುಸಾರವಾಗಿ ಇಂದ್ರಿಯಗಳು ಲೋಪ ದೋಷಗೊಂಡು ಉಂಟಾಗಿರುತ್ತದೆ

ಇಲ್ಲಿ ಮನುಷ್ಯನಿಗೆ ತಾನು ಇರುವ ವಾತಾವರಣದಲ್ಲಿ ಆಂತರಿಕವಾಗಿ ತನ್ನ ವಾತಾವರಣದಲ್ಲಿನ ಸುಖ-ದುಃಖಗಳನ್ನು ಅರಿಯುವ ಮಾಧ್ಯಮವೆಂದರೆ ತನ್ನ ಇಂದ್ರಿಯಗಳು ಈ ಇಂದ್ರಿಯಗಳು ಆತನ ಆಂತರಿಕ ಸಂತೋಷಕ್ಕೂ ಮತ್ತು ಬಾಹ್ಯ ಚಟುವಟಿಕೆಗಳಿಗೂ ಸೇತುವೆಯಾಗಿರುತ್ತದೆ ತನ್ನ ಎಲ್ಲಾ ಇಂದ್ರಿಯಗಳು ಸಮರ್ಪಕವಾಗಿ ಕೆಲಸ ಮಾಡಿ ತನ್ನ ವಾತಾವರಣದಲ್ಲಿನ, ಮನಸ್ಸು ಬಯಸುವ ಎಲ್ಲಾ ಪೂರಕ ವಿಷಯಗಳನ್ನು ಇಂದ್ರಿಯಗಳ ಮುಖಾಂತರ ತೆಗೆದುಕೊಂಡಾಗ ಅದು ಆತನಿಗೆ ಸುಖದ ಸಮಯವಾಗಿರುತ್ತದೆ ಆತನ ಮನಸ್ಸಿಗೆ ಇಷ್ಟವಿಲ್ಲದ ಅಥವಾ ಇಂದ್ರಿಯಗಳಿಂದ ಸರಿಯಾದ ಮಾಹಿತಿಯನ್ನು ತೆಗೆದುಕೊಳ್ಳಲು ಆಗದಿದ್ದ ಸಮಯದಲ್ಲಿ ಅದು ಆತನಿಗೆ ದುಃಖದ ಸಮಯವಾಗಿರುತ್ತದೆ

ಇಲ್ಲಿ ಎರಡು ವಿಚಾರಗಳು ವ್ಯಕ್ತಿಯ ಸುಖ ದುಃಖಗಳನ್ನು ನಿರ್ಧರಿಸುತ್ತಿರುತ್ತದೆ
ಒಂದು ಆ ವ್ಯಕ್ತಿಯ ಸುತ್ತಮುತ್ತಲಿನ ವಾತಾವರಣ , ಎರಡನೆಯದು ಆ ವಾತಾವರಣಕ್ಕೆ ಆ ವ್ಯಕ್ತಿಯ ಇಂದ್ರಿಯಗಳು ಹೇಗೆ ಪ್ರತಿಕ್ರಿಸುತ್ತಿವೆ ಎಂಬುದಾಗಿದೆ

ವಾತಾವರಣದಿಂದ ಬಂದಂತ ಪ್ರತಿಕ್ರಿಯೆಯು ಇಂದ್ರಿಯಗಳಿಗೆ ತಲುಪಿ ಅದು ಆತನ ನರ ವ್ಯವಸ್ಥೆಗಳ ಮುಖಾಂತರ ಆತನ ಮೆದುಳಿಗೆ ತಲುಪಿ ಅಲ್ಲಿ ಕೆಲವೊಂದು ಗ್ರಂಥಿಗಳಿಂದ ಸಂತೋಷಕ್ಕೆ ಅಥವಾ ದುಃಖಕ್ಕೆ ಕಾರಣವಾದ ಹಾರ್ಮೋನ್ ಗಳನ್ನು ಸ್ರವಿಸುತ್ತದೆ ಇದರಿಂದ ಆತನ ಮನಸ್ಸಿನಲ್ಲಿ ಆಲೋಚನೆಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ

ಆದ್ದರಿಂದ ವ್ಯಕ್ತಿಯ ನರ ವ್ಯವಸ್ಥೆಯು ನರಮಂಡಲದ ವ್ಯವಸ್ಥೆಯು ಮತ್ತು ಇಂದ್ರಿಯಗಳು ಇಲ್ಲಿ ಪ್ರಮುಖ ಸ್ಥಾನವನ್ನು ಪಡೆಯುತ್ತದೆ ನರ ವ್ಯವಸ್ಥೆಗೆ ಕಾರಕವಾದ ಗ್ರಹ ಜ್ಯೋತಿಷ್ಯ ಶಾಸ್ತ್ರದಲ್ಲಿ ನರ ವ್ಯವಸ್ಥೆಗಳಿಗೆ ಕಾರಕವಾದ ಗ್ರಹ ಬುಧ ಗ್ರಹವಾಗಿತ್ತು ವ್ಯಕ್ತಿಯ ಜಾತಕದಲ್ಲಿ ಬುಧಗ್ರಹರಿಗೆ ಗೋಚಾರದಲ್ಲಿ ಶುಭ ಗ್ರಹವಾದ ಗುರುಗ್ರಹವು ಸಂಯೋಗಗೊಂಡಾಗ ಆತನ ನರ ವ್ಯವಸ್ಥೆಯು ಅತ್ಯಂತ ಕ್ಷಮತೆಯಿಂದ ಯಾವುದೇ ಅಡ್ಡಿ ಇಲ್ಲದೆ ನರ ವ್ಯವಸ್ಥೆಯು ಕಾರ್ಯಾಚರಣೆಗೊಂಡು ಆತನ ಇಂದ್ರಿಯಗಳಿಂದ ಬರುವಂತಹ ಸಮಾಚಾರವನ್ನು ಸಂಸ್ಕರಿಸಿ ನೇರವಾಗಿ ಮೆದುಳಿಗೆ ಕೊಡುವುದರಿಂದ ಮತ್ತು ನರ ವ್ಯವಸ್ಥೆಯ ಪೂರ್ಣ ಕ್ಷಮತೆಯು ಎಲ್ಲಾ ಇಂದ್ರಿಯಗಳನ್ನು ಒಂದುಗೂಡಿಸುವುದರಿಂದ ಆತನಿಗೆ ಅದು ಕಷ್ಟದಲ್ಲಿಯೂ ಸಹ ಸುಖವನ್ನು ತಂದು ಕೊಡುವಂತಹ ಸ್ಥಿತಿಯನ್ನು ಉಂಟುಮಾಡುತ್ತದೆ ಒಂದು ವೇಳೆ ಜಾತಕದ ಬುಧರ ಮೇಲೆ ಗೋಚಾರದಲ್ಲಿ ಅಶುಭ ಗ್ರಹಗಳ ಸಂಯೋಗ ಆದಾಗ ಆತನ ನರ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಉಂಟಾಗಿ ಇಂದ್ರಿಯಗಳಿಂದ ಸಂಗ್ರಹಿಸಲ್ಪಟ್ಟ ಮಾಹಿತಿಯು ಅಸಮರ್ಪಕವಾಗಿ ಮೆದುಳನ್ನು ಸೇರುತ್ತದೆ ಇದರಿಂದ ಆತನಿಗೆ ಸುಖವನ್ನುಂಟು ಮಾಡುವ ಗ್ರಂಥಿಗಳು ಸ್ರವಿಸದೆ ಇರುವುದರಿಂದ ಆತನಿಗೆ ಸುತ್ತಮುತ್ತಲಿನಲ್ಲಿ ಸಂತೋಷದ ಸಂದರ್ಭ ಇದ್ದಾಗಲೂ ಅದನ್ನು ಆತ ಪೂರ್ಣವಾಗಿ ಅನುಭವಿಸಲು ಅಸಮರ್ತನಾಗುತ್ತಾನೆ..

ಇದರಿಂದ ನಾವು ತಿಳಿದುಕೊಳ್ಳುವುದೇನೆಂದರೆ ವ್ಯಕ್ತಿಯ ಸಂತೋಷವಿರಲಿ ದುಃಖದ ವಾತಾವರಣವಿರಲಿ ಅದು ಆತನು ಹೇಗೆ ಸ್ವೀಕರಿಸುತ್ತಾನೆ ಎಂಬುದರ ಮೇಲೆ ನಿಂತಿರುತ್ತದೆ ಇದನ್ನು ಅರಿತ ನಮ್ಮ ಪುರಾತನ ಜ್ಞಾನಿಗಳು ಋಷಿಮುನಿಗಳು ಇಂದ್ರಿಯಗಳಿಗೆ ಸಂಬಂಧಪಟ್ಟ ಜ್ಞಾನವನ್ನು ಮತ್ತು ಮನಸ್ಸನ್ನು ಅರಿತುಕೊಳ್ಳುವ ಜ್ಞಾನವನ್ನು ಕೊಟ್ಟಿರುತ್ತಾರೆ ಅದರಲ್ಲಿ ಪ್ರಮುಖವಾದದ್ದು

  1. ಇಂದ್ರಿಯ ಪ್ರತ್ಯಹಾರ ಇದರಲ್ಲಿ ನಮ್ಮ ಇಂದ್ರಿಯಗಳಿಂದ ಬರುವಂತಹ ಎಲ್ಲಾ ಮಾಹಿತಿಗಳನ್ನು ನಾವು ಸಂಪೂರ್ಣವಾಗಿ ಮನಸ್ಸಿಗೆ ಅಥವಾ ಮೆದುಳಿಗೆ ತೆಗೆದುಕೊಂಡು ಹೋಗದೆ ಅದನ್ನು ಅಲ್ಲೇ ಬಿಟ್ಟು ನಮ್ಮ ಬುದ್ಧಿಯ ಅನುಸಾರ ನಾವು ಕೆಲಸ ಮಾಡುವುದು ಇಲ್ಲಿ ಇಂದ್ರಿಯಗಳಿಗೆ ಹೆಚ್ಚು ಮಹತ್ವವನ್ನು ಕೊಡದೆ ಇಂದ್ರಿಯ ಸುಖಕ್ಕೆ ಹೆಚ್ಚು ಮಹತ್ವವನ್ನು ಕೊಡದೆ ಇಂದ್ರಿಯಗಳನ್ನು ಕೇವಲ ಸಾಧನವಾಗಿ ಬಳಸಿಕೊಳ್ಳುವುದಾಗಿರುತ್ತದೆ
  2. ಶೂನ್ಯ ಸಾಧನೆ ಮನಸ್ಸನ್ನು ಶೂನ್ಯದ ಕಡೆಗೆ ಸಂಪೂರ್ಣ ನಿಶ್ಯಬ್ದದದೆಡೆಗೆ ತೆಗೆದುಕೊಂಡು ಹೋಗುವುದು ಮನಸ್ಸು ತನ್ನ ವ್ಯಕ್ತಿಯ ಎಲ್ಲಾ ಶಕ್ತಿಯನ್ನು ಉಪಯೋಗಿಸಿಕೊಳ್ಳುವುದರಿಂದ ಹೆಚ್ಚು ಮನಸ್ಸನ್ನು ಉಪಯೋಗಿಸಿಕೊಳ್ಳುವ ವ್ಯಕ್ತಿಯು ಬೇಗ ಸುಸ್ತಾಗುವುದು ಹೆಚ್ಚು ಆಲಸಿಯಾಗುವುದು ಅತಿ ಹೆಚ್ಚು ಆಹಾರವನ್ನು ಸೇವಿಸಲು ಬಯಸುತ್ತಾನೆ . ಏಕೆಂದರೆ ಮನಸ್ಸು ವ್ಯಕ್ತಿಯ ದೇಹದಲ್ಲಿ ಉತ್ಪತ್ತಿಯಾಗುವ ಶಕ್ತಿಯನ್ನು ಹೆಚ್ಚಾಗಿ ಬೆಳೆಸಿಕೊಳ್ಳುತ್ತದೆ ಇದರಿಂದ ಇಂದ್ರಿಯಗಳಿಗೂ ಮತ್ತು ಮೆದುಳಿಗೆ ಆಗುವ ಸಂಪರ್ಕವನ್ನು ಮನಸ್ಸು ಹೆಚ್ಚು ತಡೆಯುತ್ತದೆ ಶೂನ್ಯ ಸಾಧನೆಯಿಂದ ಅಥವಾ ಮನಸ್ಸನ್ನು ಕೇವಲ ಒಂದು ಕೆಲಸದೆಡೆಗೆ ಪ್ರಚೋದಿಸುವುದರಿಂದ ಆ ವ್ಯಕ್ತಿಯಲ್ಲಿ ಉತ್ಪತ್ತಿಯಾಗುವ ದೈಹಿಕ ಶಕ್ತಿಯು ಶೇಖರಣೆಗೊಂಡು ಆತ ಇನ್ನೂ ಹೆಚ್ಚು ಕೆಲಸ ಮಾಡಲು ಉತ್ಸುಕನಾಗುತ್ತಾನೆ.
  3. ಜಾತಕರ ಜಾತಕದ ಬುಧರ ಮೇಲೆ ಗೋಚಾರದ ಗುರು ರವರು ಇದ್ದಾಗ ಆ ವ್ಯಕ್ತಿಯು ಸುಖಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಮಾಡುವುದರಿಂದ

ಹೀಗೆ ವ್ಯಕ್ತಿಯ ಸುಖ ಮತ್ತು ದುಃಖದ ದಿನಗಳನ್ನು ನಾವು ಅರಿತುಕೊಂಡು ಅದರಂತೆ ನಡೆದಾಗ ವ್ಯಕ್ತಿಯು ಸದಾ ಸುಖವಾಗಿರಲು ಸಹಾಯವಾಗಿರುತ್ತದೆ ದುಃಖದಲ್ಲಿಯೂ ಸಹ ಸುಖವಾಗಿರಲು ಆತನ ಸಮಚಿತ್ತದಿಂದ ಇರಲು ಸಹಾಯವಾಗುತ್ತದೆ.


ಈ ವಿಚಾರವನ್ನು ನಾವು ಎಲ್ಲಿ ಉಪಯೋಗಿಸಬಹುದು

ಇನ್ನು ನಾವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೋಡಿದ್ದಲ್ಲಿ ಜಾತಕದ ಬುಧರ ಮೇಲೆ ಗೋಚಾರದ ಕೇತು ಬಂದಾಗ ಮನೆಯಲ್ಲಿನ ವಯಸ್ಕರ ಮಕ್ಕಳು ಪ್ರೀತಿ ಪ್ರೇಮದ ಬಲೆಯಲ್ಲಿ ಬಿಡುವುದು ಅಥವಾ ತನ್ನ ಸ್ನೇಹಿತರುಗಳೊಂದಿಗೆ ಅತಿಹೆಚ್ಚು ಸಾಮೀಪ್ಯವನ್ನು ಬಯಸುವುದು ಜರುಗುತ್ತಿರುತ್ತದೆ ಇದರಿಂದ ಪೋಷಕರು ಯಾವುದೇ ಭಯವನ್ನು ಬೀಳದೆ ಅವರಿಗೆ ಆ ಸಮಯಕ್ಕೆ ಬೇಕಾದಂತಹ ಜ್ಞಾನ ಮತ್ತು ಮಾಹಿತಿಯನ್ನು ನೀಡಿ ಅವರಿಗೆ ಹೆಚ್ಚು ಸಾಮಿಪ್ಯವನ್ನು ಕೊಟ್ಟಾಗ ಅವರು ದಾರಿ ತಪ್ಪುವುದರಿಂದ ಪಾರು ಮಾಡಬಹುದು.

ಇನ್ನು ಗಂಡ ಹೆಂಡತಿಯರ ಮಧ್ಯದಲ್ಲಿ ದೈಹಿಕ ಸುಖಕ್ಕೆ ಸಂಬಂಧಪಟ್ಟಹಾಗೆ ಅಥವಾ ಸಾಂಸಾರಿಕ ಸಾಮರಸ್ಯಕ್ಕೆ ಸಂಬಂಧಪಟ್ಟಹಾಗೆ ಕೆಲವೊಂದು ಮನಸ್ತಾಪಗಳು ಉಂಟಾಗುತ್ತಿರುತ್ತದೆ ಇವುಗಳನ್ನು ತಪ್ಪಿಸಲು ಈ ವಿಷಯವನ್ನು ಉಪಯೋಗಿಸಿ ಇರುವರ ಜಾತಕದಲ್ಲಿನ ಬುಧರ ಮೇಲೆ ಶುಭ ಗ್ರಹಗಳ ಗೋಚಾರದ ಸಂಯೋಗ ಉಂಟು ಉಂಟಾದಾಗ ಅವರಿಬ್ಬರ ನಡುವೆ ಇರುವಂತಹ ಮನಸ್ತಾಪಗಳನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.

ಈ ವಿಷಯವನ್ನು ಮುಹೂರ್ತದ ವಿಷಯದಲ್ಲಿ ನೋಡಿ ನಿಷೇಕ ಸಮಯದಲ್ಲಿ ಜಾತಕದ ಬುದರಿಗೆ ಶುಭಗ್ರಹಗಳ ಸಂಯೋಗ ಗೋಚಾರದಲ್ಲಿ ಉಂಟಾದಾಗ ನಿಷೇಕ ಮುಹೂರ್ತವನ್ನು ಕೊಡಲು ದಂಪತಿಗಳ ನಡುವೆ ಅತಿ ಹೆಚ್ಚು ಸಾಮರಸ್ಯ ಉಂಟಾಗಲು ಸಹಾಯವಾಗುತ್ತದೆ.

ವ್ಯಕ್ತಿಯು ತಾನು ಅಂದುಕೊಂಡ ಕೆಲಸವನ್ನು ಸಾಧಿಸಲು ಅಥವಾ ತನ್ನ ಎದುರುಗಡೆ ಇರುವ ಯಾವುದೇ ವ್ಯಕ್ತಿಯನ್ನು ಸುಖಪಡಿಸಿ ಆತನ ಮನಸ್ಸನ್ನು ಸಂತೋಷಪಡಿಸಲು ಈ ವಿಷಯವನ್ನು ಬಳಸಿ ಕೆಲಸವನ್ನು ಮಾಡಬಹುದು ಗೋಚರದಲ್ಲಿ ಬುಧರಿಗೆ ಶುಭಗ್ರಹಗಳ ಸಂಯೋಗ ಉಂಟಾದಾಗ ಆತನು ಎದುರುಗಡೆ ಇರುವಂತಹ ವ್ಯಕ್ತಿಗಳ ಮನಸ್ಸು ಪಡಿಸಲು ಸುಲಭವಾಗುತ್ತದೆ.

ನಾಡಿ ಜ್ಯೋತಿಷ್ಯದ ಮಹತ್ವಗಳು – ಶ್ರೀ ಮಧು ಚಿನ್ನಪ್ಪ

ನಾಡಿ ಜ್ಯೋತಿಷ್ಯ ಶಾಸ್ತ್ರದಲ್ಲಿ

೧. ಪ್ರಶ್ನ ಶಾಸ್ತ್ರ

೨. ಜಾತಕ ವಿಶ್ಲೇಷಣೆ

೩. ಗೋಚಾರ

೪. ಮಹೂರ್ತ

ಈ ಮೇಲ್ಕಂಡ ವಿಭಾಗಗಳು ಒಂದಕ್ಕೊಂದು ಸಂಬಂದಗಳಿದ್ದು

ಪ್ರಶ್ನ ಶಾಸ್ತ್ರ

ಬಂದಂತಹ ಪುಚ್ಚಕನಿಗೆ ಎರಡು ಭಾಗಗಳಾಗಿ ಉತ್ತರವನ್ನು ನೀಡುತ್ತದೆ ಒಂದು ಹೌದು ಅಥವಾ ಇಲ್ಲ. ಪುಚಕನು ಇಲ್ಲಿ ತನ್ನ ಕಾರ್ಯಗಳ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಲು ಬಂದಿರುತ್ತಾನೆ. ಇಲ್ಲಿ ಹೌದು ಅಥವಾ ಇಲ್ಲ ಎಂಬುವ ಎರಡು ಉತ್ತರಗಳು ದೊರೆಯುತ್ತದೆ ತದನಂತರ ಇವುಗಳಿಗೆ ಅನ್ವಯವಾಗುವ ಹೇಗೆ ಯಾವಾಗ ಎಲ್ಲಿ ಎನ್ನುವ ಮುಂತಾದ ಪ್ರಶ್ನೆಗಳಿಗೆ ಮುಂದಿನ ಹಂತದಲ್ಲಿ ಉತ್ತರವನ್ನು ಹುಡುಕಬಹುದು. ಇಲ್ಲಿ ವ್ಯಕ್ತಿಯ ಜಾತಕದ ಅವಶ್ಯಕತೆ ಇರುವುದಿಲ್ಲ ಬಂದಂತಹ ಸಮಯದ ಆಧಾರದ ಮೇಲೆ ಗೋಚಾರದಲ್ಲಿನ ಗ್ರಹಗಳ ಚಲನೆ ಮತ್ತು ಹೋರಾಧಿಪತಿಯ ಸ್ಥಾನ ಸಂಯೋಗಗಳು ಇವುಗಳನ್ನು ಅನುಸರಿಸಿ ಪುಚ್ಚಕರ ಪ್ರಶ್ನೆಗಳಿವೆ ಉತ್ತರವನ್ನು ಹುಡುಕುತ್ತೇವೆ

ಜಾತಕ ವಿಶ್ಲೇಷಣೆ

ಎಲ್ಲಿ ಜಾತಕ ವಿಷ್ಲೇಶಣೆ ನಮಗೆ 2-ಆಯಾಮದ ಜ್ನಾನವನ್ನು ನೀಡುತ್ತದೆ ಹಿಂದೆ ಮತ್ತು ಮುಂದೆ. ಜಾತಕನು ಈ ಹಿಂದೆ ಏನು ಮಾಡಿದ್ದ ಇನ್ನು ಮುಂದೆ ಏನು ಮಾಡುತ್ತಾನೆ ಅವನ ಕರ್ಮಗಳು ಹೇಗೆ ಇದೆ ಎಂಬುದನ್ನು ತಿಳಿಯಬಹುದಾಗಿದೆ. ಇಲ್ಲಿ ಪ್ರಮುಖವಾಗಿ 12 ರಾಶಿಗಳು 9 ಗ್ರಹಗಳು 27 ನಕ್ಷತ್ರಗಳ ಸಂಯೋಗಗಳಿಂದ ಗ್ರಹ ಸ್ಥಿತ ರಾಶಿ ನಕ್ಷತ್ರಗಳು ಇವುಗಳನ್ನು ಅನುಸರಿಸಿ ಜಾತಕ ವಿಶ್ಲೇಷಣೆಯನ್ನು ಮಾಡುತ್ತೇವೆ ಇಲ್ಲಿ ನಾವು ಅವರಿಗಿರುವ ಸಂಯೋಜನೆಗಳ ಅನುಸಾರ ಹಿಂದಿನ ಕರ್ಮ ಮುಂದಿನ ನಡೆಯನ್ನು ಅರಿಯಬಹುದಾಗಿದೆ ಇದು 2-Dimensional ಆಗಿದ್ದು ನಾವು  ಹಿಂದೆ ಮತ್ತೆ ಮುಂದೆ ಹೋಗಬಹುದಾಗಿದೆ

ಗೋಚಾರ

ಗೋಚಾರವು ನಮಗೆ ಜಾತಕ ವಿಶ್ಲೇಷಣೆಯ ಎರಡನೇ ಆಯಾಮದ ಏನು ತಡೆಯಿದಿಯೋ ಅದನ್ನು ಮೀರಿ ನಾವು ಮೂರನೇ ಆಯಾಮವನ್ನು ( 3-Dimension) ತೆರೆಯುತ್ತೇವೆ. ಇಲ್ಲಿ ಜಾತಕದಲ್ಲಿನ ಕ್ರಿಯೆಗಳು ಕರ್ಮದ ಫಲಗಳು ಯಾವಾಗ ನಡೆಯುತ್ತದೆ ಎಂಬುದನ್ನು ತಿಳಿಯಬಹುದಾಗಿದೆ ಇದರಿಂದ ಪುಚ್ಚಕನು ಜಾತಕ ವಿಶ್ಲೇಷಣೆಯನ್ನು ಅತ್ಯಂತ ನಿಖರವಾಗಿ ಮಾಡಬಹುದಾಗಿದೆ, ಗೋಚಾರವು ಜಾತಕದ ಸಂಯೋಗಗಳು ಯಾವಾಗ ಹೇಗೆ ಎಷ್ಟು ಪರಿಣಾಮದಲ್ಲಿ ಪಲ ನೀಡುತ್ತದೆ ಎಂದು ತಿಳಿಯಬಹುದಾಗಿದೆ.

ಮುಹೂರ್ತ

ಇದು ಪುರಾತನ ಜ್ನಾನಿಗಳು ಋಷಿ ಮುನಿಗಳು ಮಾನವ ಜನಾಂಗಕ್ಕೆ ಕೊಟ್ಟಂತರ ಅದ್ಬುತ ವರವಾಗಿದೆ.

ಮನುಷ್ಯನ ಮನಸ್ಸು ತನ್ನ ಕರ್ಮದ ಆದಾರದ ಮೇಲೆ ರೂಪುಗೊಂಡು, ಅದರಂತೆ ಮನುಷ್ಯನ್ನನು ಆದಿಸುತ್ತಿರುತ್ತದೆ. ಇಂತಹ ಮನಸ್ಸಿಗೆ ಬಂದಿಯಾದ ಮನುಷ್ಯನು ತನ್ನ ಕರ್ಮಪಲವನ್ನು ಅನುಬವಿಸುವ ಒಂದು ದಾರಿಯನ್ನು ಬಿಟ್ಟು ಬೇರೆ ಏನು ಮಾಡಲಾರ.

ತನ್ನ ಮನಸ್ಸನ್ನು/ ಕರ್ಮವನ್ನು ಮೀರಿ ಮನುಷ್ಯನು ಬೆಳೆಯ ಬೇಕಾದರೆ ಹುಟ್ಟಿನಿಂದ ಸಾವಿನವರೆಗೂ ಪ್ರತಿ ಹಂತದಲ್ಲಿಯೂ ಮೂಹೂರ್ತದ ಮೊರೆ ಹೋಗಬೇಕಾಗುತ್ತದೆ. ಇವುಗಳಲ್ಲಿ  ಪ್ರಮುಖವಾದವು ನಿಷೇಖ,ಗರ್ಭಾದಾನ, ಗೃಹಪ್ರವೇಶ, ಮದುವೆ, ವಿಧ್ಯಾಬ್ಯಾಸ, ಅನ್ನಪ್ರಾಸನ, ಉಪನಯನ, ಕೊಳ್ಳುವುದು ಮತ್ತು ಮಾರುವುದು ಮುಂತಾದವುಗಳಲ್ಲಿ ಮೂಹೂರ್ತವನ್ನು ಅನುಸರಿಸಿ ತನ್ನ ಕರ್ಮಪಲವನ್ನು ಮೀರಿ ಪಲವನ್ನು ಪಡೆಯಬಹುದಾಗಿದೆ.

ಜಾತಕದಲ್ಲಿನ ವ್ಯಕ್ತಿಯ ಕರ್ಮಫಲಗಳ ಒಳ್ಳೆಯ ಸಂಯೋಗಗಳಾಗಲಿ ಕೊಡಿಸಲು ಅಥವ ಕೆಟ್ಟ ಫಲಗಳನ್ನು ನಿವಾರಿಸಲು ಇರುವಂತಹ ಒಂದು ಪರಿಹಾರ ವಿಭಾಗವಾಗಿದೆ ಇಲ್ಲಿ ಗೋಚಾರವನ್ನು ಸಹ ನಾವು ತೆಗೆದುಕೊಳ್ಳುತ್ತೇವೆ ಮುಹೂರ್ತ ಮತ್ತು ಗೋಚಾರದ ಸಂಯೋಗಗಳಿಂದ ಜಾತಕದಲ್ಲಿರುವಂತಹ ಕೆಟ್ಟ ಸಂಯೋಗಳನ್ನು ಕಡಿಮೆ ಮಾಡಲು ಅಥವಾ ಪೂರ್ಣವಾಗಿ ನಿಲ್ಲಿಸಲು ಮತ್ತು ಜಾತಕದಲ್ಲಿನ ಒಳ್ಳೆಯ ಸಂಯೋಗ ಫಲಗಳನ್ನು ಸರಿಯಾದ ಸಮಯಕ್ಕೆ ಜಾತಕನಿಗೆ ಪೂರ್ಣವಾಗಿ ಕೊಡಿಸಲು ಅಥವಾ ಜಾತಕದಲ್ಲಿ ಇಲ್ಲದೆ ಇರುವಂತಹ ಈಗ ಆ ವ್ಯಕ್ತಿಗೆ ಬೇಕಾಗಿರುವಂತಹ ಸಂಯೋಗಗಳನ್ನು ಉಂಟು ಮಾಡಿ ಪರಿಹಾರಾರ್ಥವಾಗಿ ಜಾತಕನಿಗೆ ಕೊಡಿಸಲು ಮುಹೂರ್ತದ ಭಾಗ ನಮಗೆ ಸಹಾಯಮಾಡುತ್ತದೆ.

ಇರುವುದನ್ನು ಕೊಡಿಸುವಂತಹ ಶಕ್ತಿ, ಮುಹೂರ್ತದ ಸಿದ್ದಿ ಹೊಂದಲು ದೈವಗ್ನನು ತುಂಬಾ ಪ್ರಜ್ಞನಾಗಿರಬೇಕಾಗುತ್ತದೆ ಹಾಗೂ ಆತನ ಆಹಾರ ಜೀವನ ಶೈಲಿ ತುಂಬಾ ಶಿಸ್ತುಬದ್ಧವಾಗಿ ಇರಬೇಕಾಗುತ್ತದೆ ಹಾಗೂ ಇದನ್ನು ಅರಸಿ ಬರುವಂತಹ ಪುಚ್ಚಕನು ಸಹ ಸದಾ ಪ್ರಜ್ಞಾಸಹಿತನಾಗಿರಬೇಕಾಗುತ್ತದೆ ತನ್ನ ಜೀವನದ ಪ್ರತಿಯೊಂದು ಹಂತದಲ್ಲಿಯೂ ಮುಹೂರ್ತ ಮತ್ತು ಗೋಚಾರಗಳಿಗೆ ಅಂಟಿಕೊಂಡು ಇರಬೇಕಾಗುತ್ತದೆ ಈಗಿನ ಕಾಲದಲ್ಲಿ ಅಂತಹ ಇಂತವರು ಸಿಗುವುದು ದುರ್ಲಭ

WhatsApp Image 2023-08-09 at 11.59.08

ಹಣಕಾಸು ಜ್ಯೋತಿಷ್ಯ ತರಬೇತಿ ಶಿಬಿರದಲ್ಲಿ ಏಕೆ ಭಾಗವಹಿಸಬೇಕು …

ಪ್ರಸ್ತುತ ಸಮಯ ಮತ್ತು ಸನ್ನಿವೇಶಗಳನ್ನು ಗಮನಿಸಿದರೆ, ಪ್ರತಿಯೊಬ್ಬರೂ ಸಂಪತ್ತು, ಸೌಕರ್ಯಗಳು ಮತ್ತು ಐಷಾರಾಮಿ ಜೀವನವನ್ನು ಬಯಸುತ್ತಾರೆ. ಜೀವನದ ಎಲ್ಲಾ ಅಗತ್ಯಗಳು ಮತ್ತು ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದು ಇದರ ಹಿಂದಿನ ಮುಖ್ಯ ಕಾರಣ. ಆದರೆ ಅವರು ಎಷ್ಟೇ ಶ್ರಮವಹಿಸಿದರೂ, ಕೆಲವೊಮ್ಮೆ ವಿಷಯಗಳು ಕಾರ್ಯರೂಪಕ್ಕೆ ಬರುವುದಿಲ್ಲ

ಹಣಕಾಸಿನ ಬಿಕ್ಕಟ್ಟು ಬಹುತೇಕ ಸಮಯಗಳಲ್ಲಿ ಕಾಡುತ್ತಿರುತ್ತದೆ. ಜನರು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಸಂಪತ್ತನ್ನು ಕಳೆದುಕೊಳ್ಳುತ್ತಾರೆ. ಅನಿವಾರ್ಯವಾಗಿ ಕೆಲವು ಸನ್ನಿವೇಶಗಳಲ್ಲಿ ಸಾಲ ಮಾಡಬೇಕಾಗಿ ಬರುತ್ತದೆ.

ನಾಡಿ ಜ್ಯೋತಿಷ್ಯದ ಪ್ರಕಾರ, ಜನ್ಮಕುಂಡಲಿಯಲ್ಲಿನ ದೋಷಪೂರಿತ ಗ್ರಹಗಳ ಪೀಡೆಗಳಿಂದ ಕೆಲವರು ತಮ್ಮ ಜೀವನದಲ್ಲಿ ಹಣ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿದ್ದಾಗ ವ್ಯಕ್ತಿಯ ಕುಂಡಲಿ ಅಥವಾ ಜಾತಕದಲ್ಲಿನ ಗ್ರಹಗಳ ದೋಷಗಳನ್ನು ಪರಿಹರಿಸಬೇಕಾಗುತ್ತದೆ. ಇದರಿಂದಾಗಿ ನಿರಂತರ ಆರ್ಥಿಕ ಅಡಚಣೆಗಳಿಂದ ಬಳಲುತ್ತಿರುವವರು ಸುಖಮಯ ಜೀವನ ನಡೆಸಬಹುದು.

ನಾವು ಜಾಗತಿಕ ಸಾಂಕ್ರಾಮಿಕದ ಮಧ್ಯದಲ್ಲಿದ್ದೇವೆ ಈ ಸಮಯದಲ್ಲಿ ಉದ್ಯೋಗ ನಷ್ಟ ಅಥವಾ ವಜಾಗೊಳಿಸುವಿಕೆಯು ಆರ್ಥಿಕ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ. ಈ ಅವಧಿಯಲ್ಲಿ ಎಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂಬುದರ ಬಗ್ಗೆ ನಿಗಾ ಇಡುವುದು ಕಷ್ಟ. ಆದಾಗ್ಯೂ ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ. ಜನರಿಗೆ ನಿಧಾನವಾಗಿ ಕೆಲಸ ಸಿಗುತ್ತಿದೆ.

ಈ ಪರಿಸ್ಥಿತಿಯಲ್ಲಿ ನೀವು ಉದ್ಯೋಗ ಹುಡುಕುತ್ತಿದ್ದರೆ, ವೃತ್ತಿಯ ಬಗ್ಗೆ ಯಾವುದೇ ಸಂದೇಹಗಳನ್ನು ಹೊಂದಿದ್ದರೆ ಹಣಕಾಸು ಜ್ಯೋತಿಷ್ಯ ತರಗತಿಯಲ್ಲಿ ಭಾಗವಹಿಸಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಿ..

ಹೆಚ್ಚಿನ ಮಾಹಿತಿಗಾಗಿ ಕರೆಮಾಡಿ : 7676466466